ಇನ್ನು ಈ ಬಗ್ಗೆ ಮಾತನಾಡಿರುವ ವೀರೇಶ್, ಸಣ್ಣಂದ ಅಗಸಿ ಬಳಿ ಇರುವ ಹೊಟೆಲ್ ಸಮೀಪದಲ್ಲಿ ಬೈಕ್ ಪಾರ್ಕ್ ಮಾಡಿದ್ದೆ. ಅಲ್ಲಿ ಪೊದೆಯಿತ್ತು. ಮಳೆ ಬರುತ್ತಿದ್ದ ಕಾರಣ ನಾನು ಕೂಡ ಕೊಂಚ ನೆಂದಿದ್ದೆ. ಮಳೆ ನಿಂತ ಮೇಲೆ ಬೈಕ್ ಸ್ಟಾರ್ಟ್ ಮಾಡಿಕೊಂಡು ಬಂದೆ. ವಿರಕ್ತಮಠದ ಬಳಿ ಬಂದಾಗ ಪ್ಯಾಂಟ್ ನೊಳಗೆ ಏನೋ ಇದೆ ಅನುಮಾನಗೊಂಡು ನೋಡಿದಾಗ ಹಾವು ಕಾಣಿಸಿತು. ಪ್ಯಾಂಟ್ ತೇವಗೊಂಡಿದ್ದರಿಂದ ನನಗೆ ಅದರ ಸ್ಪರ್ಶ ತಿಳಿಯಲಿಲ್ಲ ಎಂದು ಹೇಳಿದ್ದಾರೆ.