ಬಿಎಂಆರ್'ಸಿಎಲ್ ಎಂಡಿ ಮಹೇಂದ್ರ ಜೈನ್ ಅವರು ಮಾತನಾಡಿ, ಮೆಟ್ರೋ ಸೇವೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಾಗಿದೆ. ಮೆಟ್ರೋ ಸೇವೆಗಳನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ತರಲುವ ಅಗತ್ಯವಿದೆ. ನಗರದ ಜೀವನದಲ್ಲಿ ಚಲನಶೀಲತೆ ಎಂಬುದು ಅತ್ಯಂತ ಮುಖ್ಯವಾದದ್ದು. ಇಂತಹ ಚಲನಶೀಲತೆಯನ್ನು ಪ್ರತಿಬಂಧಿಸುವ ಶಕ್ತಿಗಳನ್ನು ನಿಯಂತ್ರಸಬೇಕು ಎಂದು ಹೇಳಿದ್ದಾರೆ.