ಮನೆ ಮಾಲೀಕ ಅನಿಲ್ ಕುಮಾರ್ ಆರ್. ಮಾತನಾಡಿ, ಮಕ್ಕಳು ಬಹಳ ಚುರುಕಾಗಿದ್ದರು. ಮಕ್ಕಳ ಪೋಷಕರು ನೇಪಾಳ ಮೂಲದವಾಗಿದ್ದು, ಪ್ರತೀನಿತ್ಯ ಮಕ್ಕಳನ್ನು ಮನೆಯೊಳಗೆ ಬಿಟ್ಟು ಬೀಗ ಹಾಕಿಕೊಂಡೇ ಕೆಲಸಕ್ಕೆ ತೆರಳುತ್ತಿದ್ದರು. ದುರಂತದಲ್ಲಿ ಮಕ್ಕಳು ಅಂತ್ಯಗೊಂಡಿರುವುದು ನಿಜಕ್ಕೂ ದುರಾದೃಷ್ಟಕರ. ಕಾಂಪೌಂಡ್ ನಲ್ಲಿ ಮಕ್ಕಳು ಆಟವಾಡುತ್ತಿರುವುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ ಎಂದು ಹೇಳಿದ್ದಾರೆ.