ಬಂಧಿತ ಮೀನುಗಾರರನ್ನು ಬಿಡಿಸಲು ಮಧ್ಯಸ್ಥಿಕೆ ವಹಿಸಿ: ಸುಷ್ಮಾ ಸ್ವರಾಜ್ ಗೆ ಪರಮೇಶ್ವರ್ ಟ್ವೀಟ್

: ಜುಲೈ ತಿಂಗಳಲ್ಲಿ ಭಟ್ಕಳದ 18 ಮೀನುಗಾರರನ್ನು ಇರಾನ್ ಬಂಧಿಸಿದ್ದು ಅವರನ್ನು ಬಿಡುಗಡೆಗೊಳಿಸಲು ಸಹಾಯ ಮಾಡಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ...
ಪರಮೇಶ್ವರ್
ಪರಮೇಶ್ವರ್
Updated on
ಬೆಂಗಳೂರು: ಜುಲೈ ತಿಂಗಳಲ್ಲಿ ಭಟ್ಕಳದ 18 ಮೀನುಗಾರರನ್ನು ಇರಾನ್ ಬಂಧಿಸಿದ್ದು ಅವರನ್ನು ಬಿಡುಗಡೆಗೊಳಿಸಲು ಸಹಾಯ ಮಾಡಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಟ್ವಿಟ್ ಮಾಡಿದ್ದಾರೆ.
ನಮ್ಮ ಮೀನುಗಾರರು ಹಾಗೂ ಬೋಟ್ ಕಳೆದ 1 ತಿಂಗಳಿಂದ ಇರಾನ್ ವಶದಲ್ಲಿದೆ ನೀವು ಅಲ್ಲಿರುವ ನಮ್ಮ ರಾಯಭಾರಿಯ ಜೊತೆ ಮಾತನಾಡಿ, ಅವರನ್ನು ಬಿಡುಗಡೆಗೊಳಿಸಲು ಕೂಡಲೇ ಅಗತ್ಯವಾದ ಎಲ್ಲಾ ಕ್ರಮ ತೆಗೆದುಕೊಳ್ಳಬೇಕೆಂದು, ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಪರಮೇಶ್ವರ್ ಆಗ್ರಹಿಸಿದ್ದಾರೆ.
18 ಮಂದಿ ಮೀನುಗಾರರು ಆಚಾನಕ್ ಆಗಿ ಇರಾನ್ ಗಡಿ ತಲುಪಿದ್ದರು. ಅವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. ಈ ಘಟನೆ ನಡೆದು ಅನೇಕ ತಿಂಗಳುಗಳು ಕಳೆದರೂ ಭಾರತ ಸರ್ಕಾರದಿಂದ ಯಾವುದೇ ಸಹಕಾರ ಲಭ್ಯವಾಗಿಲ್ಲ. ತಮ್ಮ ಬಂಧಿತ ಮೀನುಗಾರರನ್ನು ಬಿಡಿಸಬೇಕೆಂದು ಅವರ ಕುಟುಂಬಸ್ಥರು ಸ್ಥಳೀಯ ಆಡಳಿತಾಧಿಕಾರಿಗಳಲ್ಲಿ ಮನವಿ ಮಾಡಿದ್ದರು, 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com