ಚಿರನಿದ್ರೆಗೆ ಜಾರಿಗೆ ಕಲಿಯುಗದ ಕರ್ಣ: ಮಾಲೀಕನ ನೆನೆದು ಕಣ್ಣೀರಿಡುತ್ತಿದೆ ಅಂಬಿ ಸಾಕಿದ ಶ್ವಾನಗಳು!
ತೀವ್ರ ಅನಾರೋಗ್ಯದಿಂದಾಗಿ ಚಿರನಿದ್ರೆಗೆ ಜಾರಿರುವ ಕಲಿಯುಗ ಕರ್ಣ ಅಂಬರೀಷ್ ಅವರನ್ನು ನೆನೆದು ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿರುವ ನಡುವಲ್ಲೇ, ಅಂಬಿ ಸಾಕಿದ ಶ್ವಾನಗಳ ರೋದನ ಎಲ್ಲರ ಹೃದಯ ಕಲಕುವಂತೆ ಮಾಡುತ್ತಿದೆ...
ಬೆಂಗಳೂರು: ತೀವ್ರ ಅನಾರೋಗ್ಯದಿಂದಾಗಿ ಚಿರನಿದ್ರೆಗೆ ಜಾರಿರುವ ಕಲಿಯುಗ ಕರ್ಣ ಅಂಬರೀಷ್ ಅವರನ್ನು ನೆನೆದು ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿರುವ ನಡುವಲ್ಲೇ, ಅಂಬಿ ಸಾಕಿದ ಶ್ವಾನಗಳ ರೋದನ ಎಲ್ಲರ ಹೃದಯ ಕಲಕುವಂತೆ ಮಾಡುತ್ತಿದೆ.
ಸಾಕು ಪ್ರಾಣಿಗಳ ಮೇಲೆ ಅಂಬರೀಷ್ ಅವರು ವಿಶೇಷ ಪ್ರತಿಯನ್ನು ಇಟ್ಟುಕೊಂಡಿದ್ದರು. ಅದರಲ್ಲೂ ಕನ್ವರ್ ಹಾಗೂ ಬುಲ್ ಬುಲ್ ಈ ಎರಡು ಹೆಸರಿನ ಶ್ವಾನಗಳೆಂದರೆ ಅಂಬರೀಷ್ ಅವರಿಗೆ ಎಲ್ಲಿಲ್ಲದ ಪ್ರೀತಿಯಿತ್ತು.
ಬುಲ್ ಬುಲ್ ಹೆಣ್ಣು ನಾಯಿಯಾಗಿದ್ದು, ಕನ್ವರ್ ಗಂಡು ನಾಯಿಯಾಗಿದೆ. ಎರಡೂ ಶ್ವಾನಗಳು ಇದೀಗ ಮಾಲೀಕನ ಕಳೆದುಕೊಂಡು ಮೂಕರೋಧನೆಯನ್ನು ಅನುಭವಿಸುತ್ತಿವೆ.
ಜೆಪಿ ನಗರದಲ್ಲಿ ಅಂಬರೀಷ್ ಮನೆಯಿದ್ದು, ಮಾಲೀಕ ಕಾಣದೆ ಇರುವುದಕ್ಕೆ ಶ್ವಾನಗಳು ಕಂಗಾಲಾಗಿವೆ. ಅಂಬರೀಷ್ ಅವರನ್ನು ನೆನೆದು ಶ್ವಾನಗಳು ಕಣ್ಣೀರಿಡುತ್ತಿರುವುದು ಎಲ್ಲರ ಮನಕಲುಕುತ್ತಿದೆ.