ಅಂಬಿ' ಅಂತಿಮ ಯಾತ್ರೆ ಆರಂಭ: ಸಹಸ್ರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿ

ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಾರ್ಥಿವ ಶರೀರ ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋದತ್ತ ಸಾಗುತ್ತಿದೆ.ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದಾರೆ.
ಅಂಬರೀಷ್ ಅಂತಿಮ ಯಾತ್ರೆಯ ಚಿತ್ರ
ಅಂಬರೀಷ್ ಅಂತಿಮ ಯಾತ್ರೆಯ ಚಿತ್ರ

ಬೆಂಗಳೂರು: ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಾರ್ಥಿವ ಶರೀರ ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋದತ್ತ ಸಾಗುತ್ತಿದೆ. 1800 ಸಾವಿರ ಕೆಜಿ ಹೂಗಳಿಂದ ಈ ವಿಶೇಷ ವಾಹನವನ್ನು ಆಲಂಕೃತಗೊಳಿಸಲಾಗಿದ್ದು,  ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದಾರೆ.

ಕಂಠೀರವ ಕ್ರೀಡಾಂಗಣದಿಂದ  ಆರಂಭವಾಗಿರುವ ಈ ಮೆರವಣಿಗೆ ಹಲಸೂರು ಗೇಟ್ ಪೊಲೀಸ್ ಠಾಣೆ, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಕಾವೇರಿ ಜಂಕ್ಷನ್,  ಭಾಷ್ಯಂ ಸರ್ಕಲ್,  ಸ್ಯಾಂಕಿ ರಸ್ತೆ. ಮಾರಮ್ಮ ವೃತ್ತ, ಯಶವಂತಪುರ ಫ್ಲೇ ಓವರ್,  ಮೆಟ್ರೋ ನಿಲ್ದಾಣದಿಂದ , ಆರ್ ಎಂಸಿ ಯಾರ್ಡ್, ಎಫ್ ಐಟಿನಿಂದ ಕಂಠೀರವ ಸ್ಟುಡಿಯೋದತ್ತ ಸಾಗಲಿದೆ.

ಪೊಲೀಸ್ ಸರ್ಪಗಾವಲಿನಲ್ಲಿ ಮೆರವಣಿಗೆ ಸಾಗುತ್ತಿದ್ದು, ಭದ್ರತೆಗಾಗಿ 11 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ಕು ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ಮೂರು ಅರಸೇನಾ ಪಡೆ, 30 ಕೆಎಸ್ ಪಿಆರ್ , ಮೂರು ಸಿಎಆರ್ ತುಕಡಿಗಳನ್ನು ಬಳಸಿಕೊಳ್ಳಲಾಗಿದೆ.

ಮೆರವಣಿಗೆ ಸಾಗುವ ಮಾರ್ಗವನ್ನು ನಾಲ್ಕು ಸೆಕ್ಟರ್ ಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಸೆಕ್ಟರಿಗೂ ಡಿಸಿಪಿಗಳೂ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com