ಇದರಂತೆ ಹಲವು ಕ್ಯಾಂಟೀನ್ ಗಳಲ್ಲೂ ಈ ಕುರಿತು ಪರಿಶೀಲನೆ ನಡೆಸಲಾಗಿದ್ದು, ಹಲವು ಕ್ಯಾಂಟೀನ್ ಗಳಲ್ಲಿ ಗುಣಮಟ್ಟತೆ ಕಳಪೆಯಾಗಿರುವುದು ತಿಳಿದುಬಂದಿದೆ. ರಾಮಮೂರ್ತಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ್'ಗೆ ಬೆಳಿಗ್ಗೆ 7.30ರ ಸುಮಾರಿಗೆ ಭೇಟಿ ನೀಡಿದಾಗ ಅವಲಕ್ಕಿ ಬಾತ್ ನೀಡಲಾಗಿತ್ತು. ಈ ವೇಳೆ ಗ್ರಾಹಕರ ಪ್ರತಿಕ್ರಿಯೆ ಕೇಳಿದಾಗ ಅವಲಕ್ಕಿ ಬಾತ್ ಹಳಸಿರುವುದಾಗಿ, ತಣ್ಣಗಿದೆ ಎಂದು ಹೇಳಿದರು.