ನಾನು ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ. ನನ್ನನ್ನು ಕಂಡು ಹಲವರು ಸಲಿಂಗಿ ಎಂದು ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ನನ್ನ ತಂದೆ ತಾಯಿಗೆ ಆಗಾಗ ಬೈಯುತ್ತಲೇ ಇದ್ದರು. ಈ ಬಗ್ಗೆ ಇಬ್ಬರ ನಡುವೆ ಜಗಳವಾಗುತ್ತಲೇ ಇತ್ತು. ಜಗಳ ಆದ ದಿನದಂದು ನನ್ನ ತಾಯಿ ಮಾರುಕಟ್ಟೆಗೆ ಹೋಗಿ ಬರುತ್ತೇನೆಂದು ಹೋಗಿದ್ದರು. ಆ ಬಳಿಕ ಮನೆಗೆ ಹಿಂತಿರುಗಿ ಬರಲೇ ಇಲ್ಲ. ಬಳಿಕ ತಾಯಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ತಿರುಪತಿ ಅಥವಾ ಇತರೆ ದೇಗುಲಗಳಿಗೆ ಹೋಗಿರಬಹುದು ಎಂದು ಹುಡುಕಾಟ ನಡೆಸಿದ್ದೆವು. ಆದರೂ ದೊರಕಿರಲಿಲ್ಲ. 8 ತಿಂಗಳ ಹಿಂದೆ ತಂದೆ ಸಾವನ್ನಪ್ಪಿದ್ದರು. ಆಗಲೂ ಹುಡುಕಿದ್ದೆ, ಸಿಕ್ಕಿರಲಿಲ್ಲ. ತಾಯಿ ಇದೀಗ ದೊರಕಿದ್ದು, ಸಾಕಷ್ಟು ನಿಶ್ಯಕ್ತಿಯಿಂದಿದ್ದಾರೆ.