ಸ್ಥಳೀಯ ಸಾದಿಖ್ ಎಂ ಎಂಬುವವರು ಮಾತನಾಡಿ, ಶಿವಾಜಿನಗರ ಸಂಚಾರಿ ಪೊಲೀಸ್ ಠಾಣೆ ಇನ್ಸ್'ಪೆಕ್ಟರ್ ಎಡ್ವಿನ್ ಪ್ರದೀಪ್ ಎಂಬುವವರು ಸತೀಶ್ ಎಂಬುವವರಿಗೆ ಥಳಿಸಿದ್ದರು. ಸತೀಶ್ ಅವರು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಂಡುವಂತೆ ಮನವಿ ಮಾಡಿಕೊಂಡಿದ್ದರು. ಈ ವೇಳೆ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದ್ದು, ಪಾದಚಾರಿ ಮಾರ್ಗದಿಂದ ದೂರವಿರುವಂತೆ ತಿಳಿಸಿದರು ಎಂದು ಹೇಳಿದ್ದಾರೆ.