ಬೆಂಗಳೂರು: ಕೆರೆಯಲ್ಲಿ ಈಜಲು ಹೋದ ಯುವಕ ನಿರುಪಾಲು!

ಮೋಜಿಗಾಗಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರು ನೆಲಮಂಗಲ ಬಳಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಮೋಜಿಗಾಗಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರು ನೆಲಮಂಗಲ ಬಳಿ ನಡೆದಿದೆ.
ನೆಲಮಂಗಲ ಹಳೆ ನಿಜಗಲ್ ಕೆರೆಗೆ ಈಜಲು ತೆರಳಿದ್ದ ಶ್ರೀನಿವಾಸ್ ಮೃತ ದುರ್ದೈವಿ. ಈತ ತುಮಕೂರಿನ ಶೆಟ್ಟಿಹಳ್ಳಿ ಗ್ರಾಮದವನಾಗಿದ್ದು ಈತ ನಂದಿಹಳ್ಳಿ ಸಮೀಪ ರಿಲಯನ್ಸ್ ವೇರ್ ಹೌಸ್ ನಲ್ಲಿ ಉದ್ಯೋಗಿಯಾಗಿದ್ದ.
ಬುಧವಾರ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ತನ್ನ ಆರು ಮಂದಿ ಸ್ನೇಹಿತರೊಡನೆ ಈಜಲು ತೆರಳಿದ್ದ ಯುವಕ ಶ್ರೀನಿವಾಸ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸ್ನೇಹಿತರಾದ ರಾಘವೇಂದ್ರ, ಮೋಹನ್ ಕುಮಾರ್, ವಿನಯ್ ಸಿಂಗ್, ಸಂತೋಷ್, ಸುರೇಶ್ ಬಾಬು ಮತ್ತು ತೇಜಸ್ ಜತೆಗೆ ಶ್ರೀನಿವಾಸ್ ಈಜಿ ಈಜಿ ಆಯಾಸಗೊಂಡಿದ್ದರು ಎನ್ನಲಾಗಿದ್ದು ಇದ್ದಕ್ಕಿದ್ದಂತೆ ಕಣ್ಮರೆ ಆಗಿದ್ದಾನೆ.
ಶ್ರೀನಿವಾಸ್ ನೀರಲ್ಲಿ ಮುಳುಗುವ ವೀಡಿಯೋ ಇನ್ನೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ಶ್ರೀನಿವಾಸ್ ಜತೆ ಈಜುತ್ತಿದ್ದ ಯಾರೊಬ್ಬರಿಗೂ ಅವನನ್ನು ಉಳಿಸಲಾಗಲಿಲ್ಲ.ನಿವಾಸ್ ಮುಳುಗುತ್ತಿರುವಾಗ ದಡದಲ್ಲಿರುವ ಮತ್ತೊಬ್ಬ ಸ್ನೇಹಿತ, ಅವನು ಮುಳುಗುತ್ತಿದ್ದಾನೆ ಜುಟ್ಟು ಹಿಡಿದು ಮೇಲೆತ್ತಿ ಅನ್ನುತ್ತಿದ್ದರೂ ಮೇಲೆತ್ತಲು ಸಾಧ್ಯವಾಗಿಲ್ಲ ಎಂದಿರುವುದು ಸಹ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಇನ್ನೊಂದೆಡೆ ಮೃತ ಶ್ರೀನಿವಾಸ್ ಚಿಕ್ಕಮ್ಮ ಮಾತನಾಡಿ ಶ್ರೀನಿವಾಸ್ ಗೆ ಈಜು ಬರುತ್ತಿರಲಿಲ್ಲ, ಅವನಿಗೆ ನೀರು ಎಂದರೆ ಭಯವಿತ್ತು ಎಂದಿದ್ದಾರೆ. ನೀರಿಗೆ ಇಳಿಯಬೇಡ ಎನ್ನುವ ಸ್ನೇಹಿತನ ಮಾತಿಗೆ ಬೆಲೆ ನೀಡದೆ ಶ್ರೀನಿವಾಸ್ ಕೆರೆಯಲ್ಲಿ ಈಜಲು ಮುಂದಾದ ಎನ್ನಲಾಗಿದೆ.
ಶ್ರೀನಿವಾಸ್ ನಾಪತ್ತೆ ಸುದ್ದಿ ತಿಳಿದ ಪೋಲೀಸರು ಕೆರೆಯಲ್ಲಿ ಶೋಧಕಾರ್ಯ ನಡೆಸಿ ಯುವಕನ ಮೃತದೇಹವನ್ನು ಮೇಲೆತ್ತಿದ್ದಾರೆ.ಪ್ರಕರಣ ಸಾಂಬಂಧ ಯುವಕನ ಆರು ಸ್ನೇಹಿತರನು ದಾಬಸ್ ಪೇಟೆ ಪೋಲೀಸರು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com