ನೂತನ ಕಾರ್ಯಪಡೆಯನ್ನು ಕಳೆದ ಭಾನುವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದರು. ಕರ್ನಾಟಕ ಪ್ರವಾಸೋದ್ಯಮ ವಿಷನ್ ಗ್ರೂಪ್ ಜೊತೆ ಕಾರ್ಯಪಡೆಯನ್ನು ಘೋಷಿಸಲಾಗಿದ್ದು ಅದನ್ನು ಮಾಜಿ ಪ್ರವಾಸೋದ್ಯಮ ಸಚಿವ ಆರ್ ವಿ ದೇಶಪಾಂಡೆ ರಚಿಸಿದ್ದರು. ಕಾರ್ಯಪಡೆಯಲ್ಲಿ ತಜ್ಞರು, ಪ್ರವಾಸೋದ್ಯಮದ ಬಗ್ಗೆ ದೂರದೃಷ್ಟಿ ಹೊಂದಿರುವವರು, ಸರ್ಕಾರಿ ಅಧಿಕಾರಿಗಳು ಮತ್ತು ಇತರ ಕೆಲವು ಷೇರುದಾರರು ಇರುತ್ತಾರೆ.