ಬೆಂಗಳೂರು: ಕ್ಯಾಬ್ ಚಾಲಕನೋರ್ವನನ್ನು ಶನಿವಾರ ಮಧ್ಯರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಸಿಲಿಕಾನ್ ಸಿಟಿಯ ಸದಾಶಿವ ಕಮಲಾ ನಗರ ನಿವಾಸಿ ಸದಾನಂದ ಕೊಲೆಯಾದ ಯುವಕ. ಶನಿವಾರ ರಾತ್ರಿ ಸ್ನೇಹಿತನೊಬ್ಬನ ಜೊತೆ ಸದಾನಂದ ಮದ್ಯ ಸೇವಿಸಲು ಮಂಜುನಾಥ ನಗರದ ಬಾಲಾಜಿ ಬಾರ್ಗೆ ತೆರಳಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಗಲಾಟೆ ತೀವ್ರವಾದ ಪರಿಣಾಮ ರಸ್ತೆ ಮೇಲೆಯೇ ಈ ಕೊಲೆ ನಡೆದಿದೆ. ವೈಯಕ್ತಿಕ ವಿಚಾರಕ್ಕೆ ಜಗಳ ನಡೆದಿದ್ದು, ಸ್ನೇಹಿತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಸದಾನಂದ ಕೆಲ ವರ್ಷಗಳ ಹಿಂದೆ ಹಲ್ಲೆ , ದೊಂಬಿ ಸೇರಿದಂತೆ ಇತರೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಳೆದ 6 ತಿಂಗಳಿನಿಂದ ಸದಾಶಿವ ಕ್ಯಾಬ್ ಓಡಿಸಿಕೊಂಡಿದ್ದ. ಮತ್ತೆ ದೊಂಬಿ, ಗಲಾಟೆ ವಿಚಾರಕ್ಕೆ ಕೈ ಹಾಕಿರಲಿಲ್ಲ. ಶನಿವಾರ ರಾತ್ರಿ ಸ್ನೇಹಿತನೊಬ್ಬನ ಜೊತೆ ಮದ್ಯ ಸೇವಿಸಲು ಸದಾನಂದ ಬಾರ್ಗೆ ತೆರಳಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ನಂತರ ಹತ್ಯೆಯಲ್ಲಿ ಗಲಾಟೆ ಕೊನೆಯಾಗಿದೆ. ರಸ್ತೆ ಮೇಲೆಯೇ ಈ ಕೊಲೆ ನಡೆದಿದೆ. ವೈಯಕ್ತಿಕ ವಿಚಾರಕ್ಕೆ ಜಗಳ ನಡೆದು ಸ್ನೇಹಿತನೇ ಕೊಲೆ ಮಾಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ.
ಮಂಜುನಾಥ ನಗರದ ಬಾಲಾಜಿ ಬಾರ್ ಬಳಿ ಘಟನೆ ನಡೆದಿದೆ. ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಬಾರ್ ಹೊರ ಭಾಗದ ಸಿಸಿಟಿವಿ ದೃಶ್ಯಾವಳಿ ಕಲೆಹಾಕಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೊಲೆಯನ್ನು ನೋಡಿದವರು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. "ನಾನು ಅಲ್ಲಿ ಹೋಗುವಾಗ ಕೊಲೆ ನಡೆದಿತ್ತು. ಜನರು ಸೇರಿದ್ದರು. ಆತನ ಕತ್ತನ್ನು ಕೊಯ್ಯಲಾಗಿತ್ತು," ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement