ಬೆಂಗಳೂರು: ಭಾರತೀಯ ಕಂದಾಯ ಅಧಿಕಾರಿ ಹಾಗೂ ತೆರಿಕೆ ಇಲಾಘೆ ಮಾಜಿ ಉಪ ಆಯುಕ್ತರ ನಿವಾಸ ಹಾಗೂ ಕಚೇರಿಗಳ ಮೇಲೆ ಕೇಂದ್ರ ತನಿಖಾ ದಳದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಇದಲ್ಲದೆ ಮತ್ತೆ ಮೂವರು ವ್ಯಕ್ತಿಗಳಿಗೆ ಸಂಬಂಧಿ ನಗರದ ಐರು ಪ್ರದೇಶಗಳ ಮೇಲೂ ಸಿಬಿಐ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಕಾರವಾರ, ಹೊಸೂರು ಹಾಗೂ ತಮಿಳುನಾಡಿನ ಕಚೇರಿ ನಿವಾಸಗಳ ಮೇಲೂ ದಾಳಿ ನಡೆಸಿದೆ.
2017ರಲ್ಲಿ ಈ ಇಬ್ಬರೂ ಅಧಿಕಾರಿಗಳು ಖಾಸಗಿ ಕಂಪನಿಯೊಂದರ ಮೇಲೆ ದಾಳಿ ನಡೆಸಿದ್ದರು. ಆದರೆ, ಅಕ್ರಮಗಳು ಕಂಡುಬಂದಿದ್ದರೂ. ಯಾವುದೇ ಕ್ರಮಗಳು ಕೈಗೊಳ್ಳದಿರುವುದು ದಾಳಿ ವೇಳೆ ಮಾಹಿತಿ ತಿಳಿದುಬಂದಿದೆ ಎಂದು ಸಿಬಿಐ ವಕ್ತಾರರು ಮಾಹಿತಿ ನೀಡಿದ್ದಾರೆ.
Advertisement