ಬಳ್ಳಾರಿ: ಯುವ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡುತ್ತಿರುವ ನಿವೃತ್ತ ಸೇನಾಧಿಕಾರಿ

ಒಮ್ಮೆ ಸೈನಿಕನಾದರೇ ಯಾವಾಗಲೂ ಸೈನಿಕನೇ ಎಂಬ ಗಾದೆ ಮಾತಿನಂತೆ ಸೈನಿಕನಿಗೆ ಯಾವಾಗಲೂ ದೇಶವೇ ಮೊದಲು, ನಂತರ ಸ್ನೇಹಿತರು ಮತ್ತು ಕುಟುಂಬ ...
ತರಬೇತಿ ನೀಡುತ್ತಿರುವ  ನಿವತ್ತ ಸೇನಾಧಿಕಾರಿ
ತರಬೇತಿ ನೀಡುತ್ತಿರುವ ನಿವತ್ತ ಸೇನಾಧಿಕಾರಿ
Updated on
ಬಳ್ಳಾರಿ:  ಒಮ್ಮೆ ಸೈನಿಕನಾದರೇ  ಯಾವಾಗಲೂ ಸೈನಿಕನೇ ಎಂಬ ಗಾದೆ ಮಾತಿನಂತೆ ಸೈನಿಕನಿಗೆ ಯಾವಾಗಲೂ ದೇಶವೇ ಮೊದಲು, ನಂತರ ಸ್ನೇಹಿತರು ಮತ್ತು ಕುಟುಂಬ ಬರುತ್ತದೆ.
ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನ ಮೊಹಮದ್ ರಫಿ, 2002 ರಲ್ಲಿ  ಭಾರತೀಯ ಸೇನೆಗೆ ದಾಖಲಾದರು, ಹವಾಲ್ದಾರ್ ಆಗಿ ಕೆಲಸ ಮಾಡಿದ್ದರು,  16 ವರ್ಷದ ಸೇವಾವಧಿ ನಂತರ ತಮ್ಮ ಸ್ವಂತ ಸ್ಥಳಕ್ಕೆ ಆಗಮಿಸಿ, ವಿಶ್ರಾಂತಿ ಪಡೆಯಲಿಲ್ಲ, ಭಾರತೀಯ ಸೇನೆ ಸೇರಲು ಬಯಸುವ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.
ತಾವು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಇತಿಹಾಸದಲ್ಲಿ ಓದಿದ  ಹಲವು ವಿಷಯಗಳು ತಲೆಯಲ್ಲಿ ತುಂಬಿದ್ದವು, ಹೀಗಾಗಿ ನನಗೆ ಸೇನೆಗೆ ಸೇರಲು ಸ್ಪೂರ್ತಿಯಾಯಿತು, ಶಾಲೆಯಲ್ಲಿ ಶಿಕ್ಷಕರು ಹೇಳುತ್ತಿದ್ದ ಕೆಚ್ಚೆದೆಯ ಸೈನಿಕರ ಬಗ್ಗೆ  ಕಥೆಗಳು ನನಗೆ ಸ್ಪೂರ್ತಿಯಾಗಿದೆ ಎಂದು ಹೇಳಿದ್ದಾರೆ.
16 ವರ್ಷಗಳ ಸೇವೆಯಲ್ಲಿ ಹಲವು ಕ್ಲಿಷ್ಟಕರ ಗಡಿಯಲ್ಲಿ ಕೆಲಸ ಮಾಡಿದ್ದೇನೆ, ಜಮ್ಮು ಕಾಶ್ಮೀರದಲ್ಲಿ ಆರು ವರ್ಷ ಕೆಲಸ ಮಾಡಿದ್ದೇನೆ, ಪ್ರತಿ ಸಲ ಮನೆಗೆ ಬಂದು ವಾಪಸ್ ಹೋಗುವಾಗ, ಮನೆಯವರೆಲ್ಲಾ ನೋವಿನಲ್ಲಿ  ಕಳುಹಿಸಿಕೊಡುತ್ತಿದ್ದರು, 
ನಾನು ಸೇನೆಗೆ ಸೇರಿದಾಗ ನನಗೆ ಯಾರು ಮಾರ್ಗದರ್ಶನ ನೀಡುವವರು ಯಾರು ಇಲ್ಲ, ಸೇನೆ ಸೇರಲು ಬೇಕಾದ ಅಹ್ರತೆಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ನಂತರ ನಾನು ಕರಾಟೆಗೆ ಸೇರಿದೆ, ಹಲವು ಕಿಮೀ ಗಳ ವರೆಗೆ ಓಡುತ್ತಿದ್ದೆ, ಸೇನೆ ಸೇರಲು ಬಯಸುವ  ಯುವಕರಿಗೆ, ಈ ರೀತಿಯ ತೊಂದಕೆ ಆಗಬಾರದೆಂದು ಸೇನೆ ಸೇರುವ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.
ಬೆಳಗ್ಗೆ 5.30 ರಿಂದ 7 ಗಂಟೆವರೆಗೂ  ತರಬೇತಿ ನಡೆಯುತ್ತಿದೆ, ಬೆಳಗ್ಗಿನ ಹೊತ್ತು, ಫುಟ್ ಬಾಲ್, ವಾಲಿಬಾಲ್, ಮತ್ತಿತರ ಆಟಗಳನ್ನು ಆಡಿಸಲಾಗುತ್ತದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ, ಭೌಗೋಳಿಕ ಹಿನ್ನೆಲೆ ಭಾರತ ಮತ್ತು ಪ್ರಪಂಚದ  ಬಗ್ಗೆ ಮಾಹಿತಿ ನಡಿ, ಭಾಷಣಗಳನ್ನು ನೀಡಲಾಗುತ್ತದೆ.
ದೇಶದ ವಿವಿದೆಡೆ ಈ ಎಲ್ಲಾ ರೀತಿಯ ತರಬೇತಿ ನೀಡಲು ಸುಮಾರು 30 ಸಾವಿರದಿಂದ 40 ಸಾವಿರ ರು ವರೆಗೆ ಚಾರ್ಜ್ ಮಾಡಲಾಗುತ್ತದೆ,  ನಾನು ಯಾವುದೇ ರೀತಿಯ ಚಾರ್ಜ್ ಮಾಡಲಾಗುತ್ತದೆ, ದೇಶಕ್ಕಾಗಿ ನಾನು ಉಚಿತ ಸೇವೆ ಮಾಡಲು ಬಯಸಿದ್ದೇನೆ, 15ರಿಂದ 23 ವರ್ಷ ವಯಸ್ಸಿನ ಯುವಕರಿಗೆ  ತರಬೇತಿ ನೀಡುತ್ತಿದ್ದಾರೆ, ಇದರಲ್ಲಿ ಈಗಾಗಲೇ ಕೆಲವರು ಪರೀಕ್ಷೆ  ಬರೆದಿದ್ದಾರೆ, 
ಕರ್ನಾಟಕದಾದ್ಯಂತ ರಫಿ ತರಬೇತಿ ಬಗ್ಗೆ  ತಿಳಿದಿದೆ, ಮುಂದಿನ ವಾರ ಮಂಡ್ಯ ಮತ್ತು ಮೈಸೂರಿನಿಂದ  ತರಬೇತಿಗಾಗಿ ತಂಡವೊಂದು ಬರುತ್ತಿದೆ, ನನ್ನ ಕೆಲಸವನ್ನು ಗುರುತಿಸಿ, ಗ್ರಾಮಸ್ಥರೇ ಇಲ್ಲಿಗೆ ಬರುವವರಿಗೆ  ಊಟ ಹಾಗೂ ವಸತಿ ವ್ಯವಸ್ಥೆ ಮಾಡುತ್ತಾರೆ ಎಂದು ರಫಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com