ಅಂಗಡಿಗಳ ಮುಂಭಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಸಜ್ಜೆಗಳು, ಬೋರ್ಡ್ಗಳು ಹಾಗೂ ನೆರಳಿಗಾಗಿ ನಿರ್ಮಿಸಿಕೊಂಡಿದ್ದ ಟಾರ್ಪೆಲ್ ಮತ್ತಿತರ ಭಾಗಗಳನ್ನು ಜೆಸಿಬಿ ಯಂತ್ರಗಳು ಕಿತ್ತುಹಾಕಿದವು. ಬಿಬಿಎಂಪಿ, ಅಗ್ನಿಶಾಮಕದಳ, ನಗರ ಪೊಲೀಸ್ ಸಂಚಾರ ವಿಭಾಗ, ಮಾರ್ಷೆಲ್ಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಮಧ್ಯಾಹ್ನದವರೆಗೂ ಕಾರ್ಯಾಚರಣೆಯನ್ನು ನಡೆಸಿದರು. ಸಂಜೆವರೆಗೂ ಕಾರ್ಯಾಚರಣೆ ನಡೆಯಲಿದ್ದು, ಒಂದು ವೇಳೆ ಮುಗಿಯದಿದ್ದಲ್ಲಿ ನಾಳೆಯೂ ಮುಂದುವರಿಯಲಿದೆ. ಸುಮಾರು 300 ಮಾರ್ಷಲ್ಗಳು, ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು, ಕಾರ್ಯಾಚರಣೆ ಮೇಲೆ ಯಾರನ್ನು ಹತ್ತಿರ ಬಿಡದೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದರು. ಒತ್ತುವರಿ ಕಾರ್ಯಾಚರಣೆ ವೇಳೆ ಮಾರುಕಟ್ಟೆಯ ಆವರಣದಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಕೂಡ ತೆರವುಗೊಳಿಸಲಾಯಿತು.