ಶಿವಮೊಗ್ಗ: ಈ ವರ್ಷದಲ್ಲಿ ಎರಡನೇ ಬಾರಿಗೆ 15ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗಿದೆ. ಶುಕ್ರವಾರ ಸಂಜೆ ಸರ್ಕಾರ ಸದ್ದಿಲ್ಲದೇ ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯದ ಮಟ್ಟ 1819 ಅಡಿ ತಲುಪಿದ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಾಧಿಕಾರ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಮೊದಲಿಗೆ ಅಧಿಕಾರಿಗಳು ಮೂರು ಕ್ರೆಸ್ಟ್ ಗೇಟ್ ರಿಲೀಸ್ ಮಾಡಿ 4 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗಿತ್ತು, ಮತ್ತೆ 15 ಸಾವಿರ ಕ್ಯೂಸೆಕ್ಸ್ ಬಿಡುಗಡೆ ಮಾಡಲಾಗಿದೆ.
ಕಳೆದ ತಿಂಗಳು ಅಧಿಕಾರಿಗಳು ಜಲಾಶಯದಿಂದ ನೀರು ಹರಿಸಿದ್ದಾರೆ, ಆಗ ಅಧಿಕಾರಿಗಳು 23ಸಾವಿರ ಕ್ಯೂಸೆಕ್ಸ್ ನೀರು ರಿಲೀಸ್ ಮಾಡಿತ್ತು. ಆದರೆ ಸತತವಾಗಿ ಮಳೆ ಸುರಿದ ಕಾರಣ ಜಲಾಶಯದ ನೀರಿನ ಮಟ್ಟ ಹೆಚ್ಚಿತ್ತು.
ಆಗಸ್ಟ್ 3 2019 ರಂದು ಜಲಾಶಯದ ನೀರಿನ ಮಟ್ಟ ಗರಿಷ್ಠ 1780.65 ಅಡಿ ತಲುಪಿತ್ತು, ಅದಾದ ನಂತರ 30 ದಿನಗಳಲ್ಲಿ 1819 ಅಡಿ ತಲುಪಿದೆ.
Advertisement