ಮಧ್ಯರಾತ್ರಿ ಕ್ಯಾಬ್ ಚಾಲಕನ ಭೀಕರ ಕೊಲೆ

ಕ್ಯಾಬ್​ ಚಾಲಕನೋರ್ವನನ್ನು ಶನಿವಾರ ಮಧ್ಯರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕ್ಯಾಬ್​ ಚಾಲಕನೋರ್ವನನ್ನು ಶನಿವಾರ ಮಧ್ಯರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಸಿಲಿಕಾನ್ ಸಿಟಿಯ ಸದಾಶಿವ ಕಮಲಾ ನಗರ ನಿವಾಸಿ ಸದಾನಂದ ಕೊಲೆಯಾದ ಯುವಕ. ಶನಿವಾರ ರಾತ್ರಿ ಸ್ನೇಹಿತನೊಬ್ಬನ ಜೊತೆ ಸದಾನಂದ ಮದ್ಯ ಸೇವಿಸಲು ಮಂಜುನಾಥ ನಗರದ ಬಾಲಾಜಿ ಬಾರ್​ಗೆ ತೆರಳಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಗಲಾಟೆ ತೀವ್ರವಾದ ಪರಿಣಾಮ ರಸ್ತೆ ಮೇಲೆಯೇ ಈ ಕೊಲೆ ನಡೆದಿದೆ. ವೈಯಕ್ತಿಕ ವಿಚಾರಕ್ಕೆ ಜಗಳ ನಡೆದಿದ್ದು, ಸ್ನೇಹಿತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಸದಾನಂದ ಕೆಲ ವರ್ಷಗಳ ಹಿಂದೆ ಹಲ್ಲೆ , ದೊಂಬಿ ಸೇರಿದಂತೆ ಇತರೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಳೆದ 6 ತಿಂಗಳಿನಿಂದ ಸದಾಶಿವ ಕ್ಯಾಬ್ ಓಡಿಸಿಕೊಂಡಿದ್ದ. ಮತ್ತೆ ದೊಂಬಿ, ಗಲಾಟೆ ವಿಚಾರಕ್ಕೆ ಕೈ ಹಾಕಿರಲಿಲ್ಲ. ಶನಿವಾರ ರಾತ್ರಿ ಸ್ನೇಹಿತನೊಬ್ಬನ ಜೊತೆ ಮದ್ಯ ಸೇವಿಸಲು ಸದಾನಂದ ಬಾರ್​ಗೆ ತೆರಳಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ನಂತರ ಹತ್ಯೆಯಲ್ಲಿ ಗಲಾಟೆ ಕೊನೆಯಾಗಿದೆ. ರಸ್ತೆ ಮೇಲೆಯೇ ಈ ಕೊಲೆ ನಡೆದಿದೆ.  ವೈಯಕ್ತಿಕ ವಿಚಾರಕ್ಕೆ ಜಗಳ ನಡೆದು ಸ್ನೇಹಿತನೇ ಕೊಲೆ ಮಾಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ.

ಮಂಜುನಾಥ ನಗರದ ಬಾಲಾಜಿ ಬಾರ್ ಬಳಿ ಘಟನೆ ನಡೆದಿದೆ. ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಬಾರ್​​ ಹೊರ ಭಾಗದ ಸಿಸಿಟಿವಿ ದೃಶ್ಯಾವಳಿ ಕಲೆಹಾಕಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೊಲೆಯನ್ನು ನೋಡಿದವರು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. "ನಾನು ಅಲ್ಲಿ ಹೋಗುವಾಗ ಕೊಲೆ ನಡೆದಿತ್ತು. ಜನರು ಸೇರಿದ್ದರು. ಆತನ ಕತ್ತನ್ನು ಕೊಯ್ಯಲಾಗಿತ್ತು," ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com