ಧಾರವಾಡ: 36 ವರ್ಷಗಳ ನಂತರ ಕೊನಗೂ ಕಳ್ಳನನ್ನು ಹಿಡಿದ ಪೊಲೀಸರು

ಭತ್ತದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು 36 ವರ್ಷಗಳ ನಂತರ ಧಾರವಾಡ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಧಾರವಾಡ: ಭತ್ತದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು 36 ವರ್ಷಗಳ ನಂತರ ಧಾರವಾಡ ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಎತ್ತಿನಗುಡ್ಡ ಗ್ರಾಮದ ಶಂಕರಪ್ಪ ಜೋಗ್ದೇರಿ ಬಂಧಿತ ಆರೋಪಿ. ಈತ 1983 ರಲ್ಲಿ  ಭತ್ತದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. 2 ದಿನಗಳ ಹಿಂದೆ ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

7 ಮಂದಿ ವಿರುದ್ಧ ಭತ್ತದ ಮಾಲೀಕರು ದೂರು ದಾಖಲಿಸಿದ್ದರು,  ಉಳಿದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು , ಒಬ್ಬ ನಾಪತ್ತೆಯಾಗಿದ್ದ. 

ಬಾಕಿ ಉಳಿದ ಪ್ರಕರಣಗಳನ್ನು ಕ್ಲಿಯರ್ ಮಾಡುವಂತೆ ಇತ್ತೀಚೆಗೆ ಜಿಲ್ಲಾ ಪೊಲೀಸ್ ಎಸ್ ಪಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ತಂಡ ರಚಿಸಿದ್ದ ಪೊಲೀಸರು ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com