ಸಿಎಎ ಬೆಂಬಲಿಸಿ ನಡೆದ ರಾಲಿಯಲ್ಲಿ ಭಾಗವಹಿಸಿದ ವರುಣ್ ಮೇಲೆ ಕೊಲೆ ಯತ್ನ

ನಗರದ ಟೌನ್ ಹಾಲ್ ಮುಂಬಾಗದಲ್ಲಿ ನಡೆದ CAA ಬೆಂಬಲಿಸಿ ನಡೆದ ಲಿಯಲ್ಲಿ ಭಾಗವಹಿಸಿದ ವರುಣ್ ರವರು ಜೆಪಿ ನಗರದ ನಿವಾಸಕ್ಕೆ ತಮ್ಮ ದ್ವಿ ಚಕ್ರದಲ್ಲಿ ಹಿಂತಿರುಗುವ ಸಂದರ್ಭದಲ್ಲಿ ಜೆಸಿ ರೋಡ್ ನಲ್ಲಿ ಇಬ್ಬರು ಅಪರಿಚಿತರು ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾರೆ.
ಸಿಎಎ ಬೆಂಬಲಿಸಿ ನಡೆದ ರಾಲಿಯಲ್ಲಿ ಭಾಗವಹಿಸಿದ ವರುಣ್ ಮೇಲೆ ಕೊಲೆ ಯತ್ನ
ಸಿಎಎ ಬೆಂಬಲಿಸಿ ನಡೆದ ರಾಲಿಯಲ್ಲಿ ಭಾಗವಹಿಸಿದ ವರುಣ್ ಮೇಲೆ ಕೊಲೆ ಯತ್ನ

ಬೆಂಗಳೂರು: ನಗರದ ಟೌನ್ ಹಾಲ್ ಮುಂಬಾಗದಲ್ಲಿ ನಡೆದ ಸಿಎಎ ಬೆಂಬಲಿಸಿ ನಡೆದ ಲಿಯಲ್ಲಿ ಭಾಗವಹಿಸಿದ ವರುಣ್ ರವರು ಜೆಪಿ ನಗರದ ನಿವಾಸಕ್ಕೆ ತಮ್ಮ ದ್ವಿ ಚಕ್ರದಲ್ಲಿ ಹಿಂತಿರುಗುವ ಸಂದರ್ಭದಲ್ಲಿ ಜೆಸಿ ರೋಡ್ ನಲ್ಲಿ ಇಬ್ಬರು ಅಪರಿಚಿತರು ಏಕಾಏಕಿ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಭೇಟಿಕೊಟ್ಟ ಸಂಸದ ತೇಜಸ್ವಿ ಸೂರ್ಯ ರವರು ವರುಣ್ ರವರ ಆರೋಗ್ಯ ವಿಚಾರಿಸಿ, ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

31 ವರ್ಷ ವಯಸ್ಸಿನ ವರುಣ್ ರವರು ಸಂಘ ಮತ್ತು ಬಿಜೆಪಿಯ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾದ ಕಾರ್ಯಕರ್ತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com