ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬಡೋರಿಯಾ ಅವರು, 'ಭಾರತೀಯ ವಾಯುಸೇನೆಯ ಸೂರ್ಯಕಿರಣ್ ಒಂಬತ್ತು ಜೆಟ್ ಟ್ರೈನರ್ ನೊಂದಿಗೆ ಪ್ರದರ್ಶನ ನೀಡುವ ಏಕೈಕ ತಂಡವಾಗಿದ್ದು, ನಿನ್ನೆಯ ದುರಂತದ ಬಳಿಕ ತಂಡ ವೈಮಾನಿಕ ಪ್ರದರ್ಶನ ನೀಡುವುದು ಅನುಮಾನವಾಗಿದೆ. ಇಂದು ಮಾತ್ರವಲ್ಲದೇ ಇಡೀ ವೈಮಾನಿಕ ಪ್ರದರ್ಶನದಲ್ಲೇ ಈ ತಂಡ ಪ್ರದರ್ಶನ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.