ದೀಪ್ತಿ ಜೊತೆಗೆ ಸಲುಗೆಯಿಂದ ರೂಪಾ ಆಗಾಗ್ಗೆ ಸ್ನೇಹಿತೆಯ ಮನಗೆ ಬಂದು ಹೋಗುತ್ತಿದ್ದಳು. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ವೇಶ್ಯಾವಾಟಿಕೆ ದಂಧೆಯಲ್ಲಿ ಕೈ ಜೋಡಿಸುವಂತೆ ರೂಪಾ ದೀಪ್ತಿಯವರನ್ನು ಒತ್ತಾಯ ಮಾಡುತ್ತಿದ್ದಳು. ಆದರೆ, ಇದಕ್ಕೆ ದೀಪ್ತಿ ಒಪ್ಪಿರಲಿಲ್ಲ. ಅಲ್ಲದೆ, ಇತ್ತೀಚೆಗೆ ರೂಪಾ ಸ್ನೇಹಿತೆ ದೀಪ್ತಿ ಬಳಿ ರೂ.10 ಸಾವಿರ ಕೇಳಿದ್ದಳು. ಸಾಲ ಕೊಡಲು ದೀಪ್ತಿ ನಿರಾಕರಿಸಿದ್ದಳು. ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ ರೂಪಾ ದೀಪ್ತಿಯವರು ಮಲಗಿದ್ದ ಸಂದರ್ಭದಲ್ಲಿ ಬಂದು ಆ್ಯಸಿಡ್ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾಳೆ.