ಬೆಂಗಳೂರು: ಪ್ರಿಯಕರನೊಂದಿಗೆ ಪತ್ನಿ ಪರಾರಿ, ನೊಂದ ಕ್ಯಾಬ್ ಚಾಲಕ ಆತ್ಮಹತ್ಯೆ

ಪ್ರಿಯಕರನೊಂದಿಗೆ ಪತ್ನಿ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದ ಕ್ಯಾಬ್ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಿಯಕರನೊಂದಿಗೆ ಪತ್ನಿ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದ ಕ್ಯಾಬ್ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.
ಕಾಂತರಾಜು ಮೃತ ದುರ್ದೈವಿ, ಈತ 10 ವರ್ಷಗಳ ಹಿಂದೆ ದೂರದ ಸಂಬಂಧಿ ಭಾಗ್ಯ ಎಂಬಾಕೆಯನ್ನು ವಿವಾಹವಾಗಿದ್ದ. ಈ ದಂಪತಿಗೆ 8 ವರ್ಷದ ಮಗು ಕೂಡ ಇದೆ. 
ಭಾಗ್ಯಳಿಗೆ ಸೋಲೂರಿನ ನಿವಾಸಿ ಕುಮಾರ್ ಎಂಬುವನ ಜೊತೆ ಸಂಬಂಧ ಇತ್ತು. ಇದನ್ನು ತಿಳಿದ ಕಾಂತರಾಜು ಪತ್ನಿಯಿಂದ ದೂರ ಇರುವಂತೆ ಆತನಿಗೆ ಎಚ್ಚರಿಕೆ ನೀಡಿದ್ದ., ಆದರೆ ಕಾಂತರಾಜು ಸಂಬಂಧಿ ಮಂಜ ಮತ್ತು ಆತನ ಪತ್ನಿ ಸುಶೀಲಾ ಕುಮಾರ್ ಗೆ ಬೆಂಬಲ ನೀಡಿದ್ದರು. 
ಇದರಿಂದಾಗಿ ಅವರಿಬ್ಬರು ಪರಾರಿಯಾಗಿದ್ದರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿರುವ ಕಾಂತರಾಜು ತನ್ನ ಸಾವಿಗೆ 4 ಜನ ಕಾರಣ ಎಂದು ಹೇಳಿದ್ದಾನೆ.
ಕಾಂತರಾಜು ಪೋಷಕರು ಕುದೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಪರಾರಿಯಾದ ಭಾಗ್ಯ ಮತ್ತು ಕುಮಾರ್ ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com