ವಿಡಿಯೊದಲ್ಲಿ ಕೇಸರಿ ಶಿರೋವಸ್ತ್ರ ಧರಿಸಿ ಧ್ವಜ ಹಿಡಿದುಕೊಂಡು ಭಜರಂಗದಳ ಕಾರ್ಯಕರ್ತರು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸುತ್ತಾ ಮಿಥುನ್ ರೈಯನ್ನು ನಿಂದಿಸುತ್ತಿದ್ದರು. ಭಜರಂಗದಳ ಕಾರ್ಯಕರ್ತರಿಗೆ ತೊಂದರೆ ಕೊಡುವುದಾಗಲಿ ಅಥವಾ ಮಧ್ಯ ಪ್ರವೇಶಿಸುವುದಾಗಲಿ ಮಾಡಿದರೆ ನಾವು ಮಿಥುನ್ ರೈಯ ಕೈ-ಕಾಲು ಮುರಿಯುತ್ತೇವೆ, ಇನ್ನೂ ಅಗತ್ಯಬಿದ್ದರೆ ಅವರ ಕತ್ತು ಸೀಳುತ್ತೇವೆ ಎಂದು ತುಳುವಿನಲ್ಲಿ ಹೇಳಿರುವ ವಿಡಿಯೊ ವೈರಲ್ ಆಗಿತ್ತು.