ಬೆಂಗಳೂರು: ರಾಜ್ಯದಲ್ಲಿ ನೆರೆ ಹಾಗೂ ಬರಪರಿಹಾರಕ್ಕೆ ಈಗಾಗಲೇ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪರಿಹಾರ ದೊರಕಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಸರ್ಕಾರಕ್ಕೆ ಯಾವುದೇ ಕಷ್ಟನೂ ಇಲ್ಲ ಸಮಸ್ಯೆಯೂ ಇಲ್ಲ ಎಲ್ಲರ ಸಹಕಾರವೂ ಇದೆ. ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಬೇಕು ಅದೆಲ್ಲವನ್ನು ಮಾಡುತ್ತೇವೆ. ನೆರೆ ಪರಿಹಾರದಲ್ಲಿ ಸಿಲುಕಿ ಕೊಂಡವರಿಗೆ ಪರಿಹಾರ ನೀಡಿದ್ದು,ಮುಂದೆನೂ ಕೊಡುತ್ತೇವೆ.ರಾಜ್ಯಕ್ಕೆ ಒಳ್ಳೆಯದಾಗಿ ಸುಭಿಕ್ಷವಾಗಲಿ ಎಂಬ ಬೇಡಿಕೊಂಡಿದ್ದೇನೆ.ಈ ಕ್ಷೇತ್ರದ ಅಭಿವೃದ್ಧಿಗಾಗಿ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ,ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಜೊತೆ ಮಾತನಾಡಿ 10 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.
Advertisement
Advertisement