ವಿದ್ಯುತ್ ಸ್ವರ್ಶ: ಒಂದೇ ಕುಟುಂಬದ ಮೂವರು ಸಾವು

ವಿದ್ಯುತ್ ಅವಘಡಕ್ಕೆ ಒಂದೇ ಕುಟುಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ವಿದ್ಯುತ್ ಅವಘಡಕ್ಕೆ ಒಂದೇ ಕುಟುಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.

ಅಗಸರಹಳ್ಳಿ ಗ್ರಾಮದ ನಿವಾಸಿಗಳಾದ ತಾಯಿ ಭಾಗ್ಯಮ್ಮ (48), ಅವರ ಮಕ್ಕಳಾದ ದಾಕ್ಷಾಯಿಣಿ (30), ದಯಾನಂದ (23) ಮೃತಪಟ್ಟವರು.

ಇಂದು ಬೆಳಿಗ್ಗೆ ಬಟ್ಟೆ ತೊಳೆದ ದಾಕ್ಷಿಯಿಣಿ ಒಣಹಾಕಲು ಹೋಗಿದ್ದ ಸಮಯದಲ್ಲಿ ಮನೆ ಮುಂದೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಾಗ ಅವರಿಗೆ ವಿದ್ಯುತ್ ಸ್ಪರ್ಶಗೊಂಡಿದೆ. ಅವರ ರಕ್ಷಣೆಗೆ ಹೋದ ತಾಯಿ, ಮಗ ಸಹ ಈ ಅವಘಡದಲ್ಲಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com