ಹಾಸನ: ಮಹಿಳೆಯ ಪ್ರಜ್ಞೆ ತಪ್ಪಿಸಿ 1.75 ಲಕ್ಷ ರೂ.ಮೌಲ್ಯದ ಮಾಂಗಲ್ಯ ಸರ ಅಪಹರಣ 

ಮಹಿಳೆಯ ಪ್ರಜ್ಞೆ ತಪ್ಪಿಸಿ 1.75 ಲಕ್ಷ ರೂ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ‌.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹಾಸನ: ಮಹಿಳೆಯ ಪ್ರಜ್ಞೆ ತಪ್ಪಿಸಿ 1.75 ಲಕ್ಷ ರೂ ಮೌಲ್ಯದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ‌.

ದಮ್ಮನಿಂಗಲ ಗ್ರಾಮದ ಕೆಂಗಮ್ಮ ಸರ ಕಳೆದುಕೊಂಡ ಮಹಿಳೆ. ಪುತ್ರ ಕೇಶವನ ಆರೋಗ್ಯ ತಪಾಸಣೆ ಮಾಡಿಸಲು ಇಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಕೇಶವನನ್ನು ಆಸ್ಪತ್ರೆಯ ಬಳಿ ಇರಿಸಿ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿಗೆ ಕೆಂಗಮ್ಮ ಬಂದಿದ್ದಾರೆ. 

ಅದೇ ಮಾರ್ಗದಲ್ಲಿ ಪರ್ಸ್ ಒಂದು ಬಿದ್ದಿತ್ತು. ಅಲ್ಲಿದ್ದ ಅಪರಿಚಿತ ಮಹಿಳೆಯೊಬ್ಬಳು, ಕೆಂಗಮ್ಮ ಅವರಿಗೆ  'ನಿಮ್ಮ ಪರ್ಸ್ ಬಿದ್ದಿದೆ ಎತ್ತಿಕೊಳ್ಳಿ' ಎಂದು ಹೇಳಿದ್ದಾರೆ. ಅದರಂತೆ ಕೆಂಗಮ್ಮ ಪರ್ಸ್ ಎತ್ತಿಕೊಂಡಾಗ ಹಣ ಹಂಚಿಕೊಳ್ಳೋಣ, ಬನ್ನಿ ಪಕ್ಕದ ಪಾಕ್೯ಗೆ ಹೋಗೋಣ ಎಂದು ಹೇಳಿ ಅಲ್ಲಿಗೆ ಕರೆದುಕೊಂಡು ಹೋಗಿದ್ದಾಳೆ

ಅಷ್ಟೊತ್ತಿಗೆ ಅಲ್ಲಿಗೆ ಸುಮಾರು 40 ವರ್ಷ ಪ್ರಾಯದ ವ್ಯಕ್ತಿ ಬಂದು 'ಪಸ್೯ ನನ್ನದು' ಎಂದು ಹೇಳಿ ಕೆಂಗಮ್ಮ ಅವರ ಪ್ರಜ್ಞೆ ತಪ್ಪಿಸಿ ಸುಮಾರು 55 ಗ್ರಾಂ ತೂಕದ ಸರ ಕಸಿದುಕೊಂಡು ಇಬ್ಬರೂ ಪರಾರಿಯಾಗಿದ್ದಾರೆ.ಶ್ರವಣಬೆಳಗೊಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com