ಬೆಂಗಳೂರು: ಬೊಲೇರೋ ವಾಹನ ಚಾಲಕ ನಿಗೂಢ ಸಾವು, ಮಂಗಳಮುಖಿಯರು ಕೊಲೆ ಮಾಡಿರುವ ಶಂಕೆ

ಹಣ್ಣು ಹಂಪಲು ತುಂಬಿಕೊಂಡು ಬಂದಿದ್ದ ಬೊಲೇರೋ ವಾಹನ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಚಳ್ಳಕೆರೆ ಮೂಲದ ಬೊಲೇರೋ ಗೂಡ್ಸ್ ವಾಹನದ ಚಾಲಕ ಬಸವರಾಜ್(26) ಮೃತ ವ್ಯಕ್ತಿ.
ಪೊಲೀಸ್
ಪೊಲೀಸ್

ಬೆಂಗಳೂರು: ಹಣ್ಣು ಹಂಪಲು ತುಂಬಿಕೊಂಡು ಬಂದಿದ್ದ ಬೊಲೇರೋ ವಾಹನ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಡೆದಿದೆ. ಚಳ್ಳಕೆರೆ ಮೂಲದ ಬೊಲೇರೋ ಗೂಡ್ಸ್ ವಾಹನದ ಚಾಲಕ ಬಸವರಾಜ್(26) ಮೃತ ವ್ಯಕ್ತಿ.

ಹಣ್ಣು ತುಂಬಿಕೊಂಡು ಬಂದಿದ್ದ ಚಾಲಕ ‌ಬಸವರಾಜ್ ವಾಹನವನ್ನು ರಸ್ತೆಯ ಬದಿ ನಿಲ್ಲಿಸಿ ಮಂಗಳಮುಖಿಯರ  ಜೊತೆ ಹೋಗಿದ್ದ, ಹಣಕ್ಕಾಗಿ ಮಂಗಳಮುಖಿಯರೇ ಆತನನ್ನು ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಾತ್ರಿ ವೇಳೆ ಹೆದ್ದಾರಿಯಲ್ಲಿ ನಿಂತು ಜನರನ್ನ ಸೆಳೆಯುವ ಮಂಗಳಮುಖಿಯರು, ಕಳೆದ ರಾತ್ರಿ ಅದೇ ರೀತಿಯಲ್ಲಿ ಬಸವರಾಜ್ ನನ್ನು ಕರೆದುಕೊಂಡು ಹೋಗಿದ್ದು ಹಲ್ಲೆ ನಡೆಸಿ ಗಂಭೀರ ಸ್ಥಿತಿಯಲ್ಲಿದ್ದ ಚಾಲಕನನ್ನು ಆಸ್ವತ್ರೆಗೆ ದಾಖಲಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com