ಬಾಗಲಕೋಟೆ: ಮದ್ಯ ಮುಕ್ತ ಕರ್ನಾಟಕಕ್ಕೆ ಆಗ್ರಹಿಸಿ ಮಹಿಳೆಯರು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದಲ್ಲಿ ನದಿಯಲ್ಲಿ ನಿಂತು ಜಲ ಸತ್ಯಾಗ್ರಹ ನಡೆಸುತ್ತಿದ್ದಾರೆ
ನೂರಾರು ಜನ ಪ್ರತಿಭಟನಾ ನಿರತ ಮಹಿಳೆಯರು ನದಿಯಲ್ಲೇ ಅರ್ಧ ಭಾಗ ಮುಳುಗಿ ಜಲಸತ್ಯಾಗ್ರಹ ಕೈಗೊಂಡಿದ್ದಾರೆ. ೨೦೦ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಮದ್ಯ ನಿಷೇಧ ಆಂದೋಲನದ ನೇತೃತ್ವದಲ್ಲಿ ನಡೆದ ಜಲಸತ್ಯಾಗ್ರಹಕ್ಕೆ ರಾಜ್ಯದಲ್ಲಿ ೫೧ ನಾನಾ ಸಂಘಟನೆಗಳು ಸಾಥ್ ನೀಡಿವೆ.
ನದಿಯಲ್ಲೇ ಮಹಿಳೆಯರು ನಿಂತು ನೀರು ಬೇಕು ಬೀರು ಬೇಡಾ, ಸರಾಯಿ ಬೇಡಾ ಶಿಕ್ಷಣ ಬೇಕು ಎಂದು ಘೋಷಣೆಗಳೊಂದಿಗೆ ಜಲಸತ್ಯಾಗ್ರಹ ಮುಂದುವರಿಸಿದ್ದಾರೆ.
Advertisement