ಬೆಂಗಳೂರು: ನಾಡು-ನುಡಿಗಳಿಗಾಗಿ ಹೋರಾಡಿದ ಅಗ್ರಗಣ್ಯ ಸಾಹಿತಿ, ಪತ್ರಕರ್ತ ಅನಕೃ ಪುಣ್ಯಸ್ಮರಣೆಯಂದು ಅವರಿಗೆ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಕನ್ನಡ ಸಾಹಿತ್ಯಲೋಕದ ಕಾದಂಬರಿ ಸಾರ್ವಭೌಮ, ಕಥೆಗಾರ, ನಾಟಕಕಾರ ಮತ್ತು ಸಂಪಾದಕರಾಗಿಯೂ ಪ್ರಸಿದ್ಧರಾಗಿದ್ದ ಅರಕಲಗೂಡು ನರಸಿಂಹರಾಯ ಕೃಷ್ಣರಾಯ (ಅ.ನ.ಕೃ) ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನಾಡು, ನುಡಿಗಳಿಗಾಗಿ ಅಹರ್ನಿಶಿ ದುಡಿದ ಅನಕೃ ಅವರಿಂದ ಸ್ಪೂರ್ತಿ ಪಡೆಯೋಣ ಎಂದು ಹೇಳಿದ್ದಾರೆ.
Advertisement
Advertisement