ವಿನಯ್ ಗುರೂಜಿಗೆ ಬ್ಲಾಕ್ ಮೇಲ್ ಪ್ರಕರಣ: ನಾಲ್ವರು ಸಿಸಿಬಿ ಬಲೆಗೆ 

ಅವಧೂತ  ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ವಿನಯ್ ಗುರೂಜಿ
ವಿನಯ್ ಗುರೂಜಿ
Updated on

ಬೆಂಗಳೂರು: ಪತ್ರಕರ್ತರ ಹೆಸರಿನಲ್ಲಿ ಅವಧೂತ ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ

ಮುನಿರಾಜು, ಮನೋಜ್, ರವಿಕುಮಾರ್ ಮುರಳಿ, ಮಂಜು ಬಂಧಿತರು .ಬಂಧಿತರು  ವಿನಯ್ ಗುರೂಜಿಯ ಭಾಷಣದ ವಿಡಿಯೋ ತುಣುಕಗಳನ್ನು ತಪ್ಪಾಗಿ ಕಾವೇರಿ ಯೂಟ್ಯೂಬ್ ಚಾನೆಲ್  ನಲ್ಲಿ ವೈರಲ್ ಮಾಡುತ್ತಿದ್ದರು. 

ಇದನ್ನು ನಿಲ್ಲಿಸಬೇಕಾದರೇ 30 ಲಕ್ಷ ಹಣ ನೀಡಬೇಕೆಂದು  ಗ್ಯಾಂಗ್ ನಲ್ಲಿದ್ದ ಮುರುಳಿ, ಗುರೂಜಿ ಅವರ ಜತೆಗಿದ್ದ ಪ್ರಶಾಂತ್ ಎಂಬುವವರಿಗೆ  ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಇದರ ಆಡಿಯೋ ರೆಕಾರ್ಡ್ ಆಗಿತ್ತು. ಆ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾವೇರಿ ಎಂಬ ಯುಟ್ಯೂಬ್ ಚಾನೆಲ್  ಸೃಷ್ಟಿಸಿ ಅದರ ಹೆಸರಿನಲ್ಲಿ ಕೃತ್ಯ ಎಸಗಿದ್ದರು ಎಂದು  ಜಂಟಿ ಪೊಲೀಸ್ ಆಯುಕ್ತ  ಸಂದೀಪ್ ಪಾಟೀಲ್ ತಿಳಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com