ನಿತ್ಯೋತ್ಸವ,ಅಚ್ಚುಮೆಚ್ಚಿನ ಕೆಎಸ್ ನಿಸಾರ್ ಅಹಮದ್ ಬದುಕು-ಬರಹ ಕುರಿತ ವರದಿ! 

ಯಾವುದೇ ಪಥ, ಪಂಗಡಕ್ಕೂ ತನ್ನನ್ನು ಸೀಮಿತಗೊಳಿಸದೆ ಸರ್ವಜನ ಪ್ರಿಯರಾಗಿದ್ದ   ಪ್ರೊಫೆಸರ್ ನಿಸಾರ್ ಅಹಮದ್ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಕಳೆದುಕೊಂಡು ಸಾಹಿತ್ಯ ಕ್ಷೇತ್ರ ಇದೀಗ ಬಡವಾಗಿದೆ. 
ಕೆ.ಎಸ್. ನಿಸಾರ್ ಅಹಮದ್
ಕೆ.ಎಸ್. ನಿಸಾರ್ ಅಹಮದ್
Updated on

ಬೆಂಗಳೂರು: ಯಾವುದೇ ಪಥ, ಪಂಗಡಕ್ಕೂ ತನ್ನನ್ನು ಸೀಮಿತಗೊಳಿಸದೆ ಸರ್ವಜನ ಪ್ರಿಯರಾಗಿದ್ದ   ಪ್ರೊಫೆಸರ್ ನಿಸಾರ್ ಅಹಮದ್ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಕಳೆದುಕೊಂಡು ಸಾಹಿತ್ಯ ಕ್ಷೇತ್ರ ಇದೀಗ ಬಡವಾಗಿದೆ. 

ದೇವನಹಳ್ಳಿಯಲ್ಲಿ ಫೆಬ್ರುವರಿ 5, 1936ರಲ್ಲಿ ಜನಿಸಿದ ಕೆಎಸ್ ನಿಸಾರ್ ಅಹಮದ್, 1956ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, 1994ರವರೆಗೆ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

10ನೇ ವಯಸ್ಸಿನಲ್ಲಿಯೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ನಿಸಾರ್ ಅಹಮದ್,  ಆಗಲೇ ಜಲಪಾತದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅಲ್ಲಿಂದ ಸಾಹಿತ್ಯ ಕಸುಬನ್ನು ಮುಂದುವರೆಸಿದ ಅವರು ಇದುವರೆಗೂ 21 ಕವನ ಸಂಕಲನಗಳು, 14 ವೈಚಾರಿಕಾ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು ಹಾಗೂ 13 ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

ಮನಸು ಗಾಂಧಿ ಬಜಾರು ಹಾಗೂ ನಿತ್ಯೋತ್ಸವ ಕೆಎಸ್ ನಿಸಾರ್ ಅಹಮದ್ ಅವರ ಪ್ರಸಿದ್ಧ ಕವನ ಸಂಕಲನಗಳಾಗಿವೆ. 1975ರಲ್ಲಿ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಸುಗಮ ಸಂಗೀತ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಗಳಿಸಿತ್ತು. ಈವರೆಗೂ 13 ಧ್ವನಿ ಸುರುಳಿಗಳ ಮೂಲಕ ಅವರು ರಚಿಸಿರುವ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ. ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಅವರ ಜಾತ್ಯಾತೀತ ಮನೋಭಾವಕ್ಕೆ ಸಾಕ್ಷಿಯಂತಿದೆ.

ಇದರ ಜೊತೆಗೆ ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ, ಭಾರತವು ನಮ್ಮ ದೇಶ, ಮನಸು ಗಾಂಧಿ ಬಜಾರು,ನೆನೆದವರ ಮನದಲ್ಲಿ, ಸುಮಹೂರ್ತ,ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ನಿತ್ಯೋತ್ಸವ, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರ, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ ಪ್ರಸಿದ್ದ ಕವನ ಸಂಕಲಗಳಾಗಿವೆ.

ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೊ ಅಣ್ಣ, ಷೇಕ್ಸ್ ಪಿಯರ್‍ನ ಒಥೆಲ್ಲೊದ ಕನ್ನಡಾನುವಾದ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ. ಅಮ್ಮ ಆಚಾರ ಮತ್ತು ನಾನು ಜನಮನ್ನಣೆ ಪಡೆದ ಗದ್ಯಗಳು.

ಕನ್ನಡ ನಾಡು, ನುಡಿಗೆ ಅಪಾರ ಕೊಡುಗೆ ನೀಡಿದ ಕೆ.ಎಸ್‌ ನಿಸಾರ್‌ ಅಹಮ್ಮದ್ ಅವರಿಗೆ 2007 ರಲ್ಲಿ ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, 2003 ರಲ್ಲಿನಾಡೋಜ ಪ್ರಶಸ್ತಿ, 2009 ರಲ್ಲಿ ಅರಸು ಪ್ರಶಸ್ತಿ ಸೇರಿದಂತೆ ಸಾಕಷ್ಟು ಗೌರವಗಳಿಗೆ ಪಾತ್ರರಾಗಿದ್ದರು. 

 2007, ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೆಎಸ್ ನಿಸಾರ್ ಅಹಮದ್, 2017ರಲ್ಲಿ ಮೈಸೂರಿನಲ್ಲಿ 407ನೇ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com