ಬೆಂಗಳೂರು: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿ ಎಸ್.ಜೆ ಅವರ ಬಿಡುಗಡೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಲಾಗುತ್ತಿದೆ.
ಸ್ಟ್ಯಾನ್ ಸ್ವಾಮಿ ಬಿಡುಗಡೆಗೆ ಆಗ್ರಹಿಸಿ ಇಂದು ಸಂಜೆ 4-5 ಗಂಟೆಯವರೆಗೆ ಬ್ರಿಗೇಡ್ ರಸ್ತೆಯಿಂದ ಶಾಂತಿನಗರ ಬಸ್ ಡಿಪಯವರೆಗೂ ಮಾನವ ಸರಪಳಿ ನಿರ್ಮಿಸಿ ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಜೆಸ್ಯೂಟ್ ಶಿಕ್ಷಣ ಸಂಸ್ಥೆಗಳು ತಿಳಿಸಿವೆ.
ಜೆಸ್ಯೂಟ್ ಪಾದ್ರಿಯಾಗಿರುವ 83 ವರ್ಷದ ಸ್ಟ್ಯಾನ್ ಸ್ವಾಮಿಯವರು ಮೂರು ದಶಕಗಳಿಂದ ಆದಿವಾಸಿ ಜನರೊಂದಿಗೆ ಹಾಗೂ ಅವರ ಸಂಕಷ್ಟಗಳು, ಭೂ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆಂದು ತಿಳಿಸಿದ್ದಾರೆ.
Advertisement