ಮಂಡ್ಯ: ಐಸೋಲೇಷನ್ ನಿಂದ ಪರಾರಿಯಾಗಿದ್ದ ಕೊರೊನಾ ಶಂಕಿತನ ಬಂಧನ

ನಗರದ ಮಿಮ್ಸ್ನ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆಯಾಗಿದ್ದ ಕೊರೊನಾ ಶಂಕಿತನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಮತ್ತೆ ಚಿಕಿತ್ಸೆಗೆ ದಾಖಲುಮಾಡುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ತಬ್ಲೀಘಿ ಜಮಾತ್
ತಬ್ಲೀಘಿ ಜಮಾತ್

ಮಂಡ್ಯ: ನಗರದ ಮಿಮ್ಸ್ನ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಾಪತ್ತೆಯಾಗಿದ್ದ ಕೊರೊನಾ ಶಂಕಿತನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಮತ್ತೆ ಚಿಕಿತ್ಸೆಗೆ ದಾಖಲುಮಾಡುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಸ್ಪತ್ರೆಯಿಂದ ಪರಾರಿಯಾಗಿದ್ದ 35 ವರ್ಷದ ವ್ಯಕ್ತಿ ನಗರದ ಶಂಕರಮಠದಲ್ಲಿ ಸಂಬಂಧಿಕರ ಮನೆಯಲ್ಲಿ ಇದ್ದ ಎನ್ನಲಾಗಿದೆ. ಸಿಕ್ಕಿ ಬಿದ್ದ ಆತನನ್ನು ಆ್ಯಂಬುಲೆನ್ಸ್ ಮೂಲಕ ಮತ್ತೆ ಆಸ್ಪತ್ರೆಗೆ ಕರೆತರಲಾಗಿದ್ದು ಆ ಮೂಲಕ ಜಿಲ್ಲಾ ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಎಲ್ಲಾ ಅತಂಕಕ್ಕೆ ತೆರೆ ಎಳೆದಿದ್ದಾರೆ.

ಘಟನೆ ವಿವರ:
ದೆಹಲಿಯ ನಿಜಾಮುದ್ದೀನ್ ಸಭೆಗೆ ತೆರಳಿದ್ದ 10 ಮೌಲ್ವಿಗಳ ಸಂಪರ್ಕದಲ್ಲಿದ್ದ ಈತನನ್ನು ಗಂಟಲು ನೋವಿನ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮಳವಳ್ಳಿಯಿಂದ ಮಂಡ್ಯ ಮಿಮ್ಸ್ಗೆ ಕರೆತಂದು ಐಸೋಲೇಷನ್ನಲ್ಲಿ ಇರಿಸಲಾಗಿತ್ತು. 

ಇಂದು ಬೆಳಿಗ್ಗೆ ಈತನ ರಕ್ತ ಮತ್ತು ಗಂಟಲು ದ್ರವವನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿ ಬಳಿಕ ಬೇರೆ ವಾರ್ಡ್ಗೆ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ನರ್ಸ್ಗಳನ್ನು ಯಾಮಾರಿಸಿ ಪರಾರಿಯಾಗಿದ್ದ.ವಿಷಯ ತಿಳಿದ ವೈದ್ಯಾಧಿಕಾರಿಗಳು ತಕ್ಷಣ ಪೊಲೀಸರಿಗೆ ಸುದ್ದಿಮುಟ್ಟಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮಿಮ್ಸ್ ಸಿಸಿ ಕ್ಯಾಮರಾಗಳ ದೃಶ್ಯಗಳ ಆಧಾರದ ಮೇಲೆ ಕಾರ್ಯಚರಣೆಗಿಳಿದ ಪೊಲೀಸರಿಗೆ ಆತ ಸಂಬಂಧಿಕರೊಂದಿಗೆ ತೆರಳುತ್ತಿದ್ದುದು ಗೊತ್ತಾಗಿ ನಗರದ ಶಂಕರಮಠದ ಸಂಬಂಧಿಕರ ಮನೆಯಲ್ಲಿ ಆತನನ್ನು ಬಂಧಿಸಿ ಮತ್ತೆ ಮಿಮ್ಸ್ನ ಐಸೋಲೇಷನ್ ಗೆ ದಾಖಲು ಮಾಡಿದ್ದಾರೆ. ಸುದ್ದಿ ತಿಳಿದ ಮಂಡ್ಯ ಎಸ್ಪಿ ಕೆ.ಪರಶುರಾಮ್, ಎಎಸ್ಪಿ ಡಾ.ವಿ.ಜೆ.ಶೋಭಾರಾಣಿ ನೇತೃತ್ವದ ಅಧಿಕಾರಿಗಳ ಭೇಟಿ ನೀಡಿ, ಆಸ್ಪತ್ರೆ ಸಿಬ್ಬಂದಿ ವಿಚಾರಣೆನಡೆಸಿ  ಪರಿಶೀಲನೆ ನಡೆಸಿದರು.

ಆತಂಕ ತಂದ ಕೊರೋನಾ ಶಂಕಿತ ವ್ಯಕ್ತಿ;
ದೆಹಲಿಯಿಂದ ಬಂದಿದ್ದ ೧೦ ಮಂದಿ ಮೌಲ್ವಿಗಳ ಪೈಕಿ ಐವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು. ಇವರ ಸಂಪರ್ಕದಲ್ಲಿದ್ದ ಈತನಿಗೂ ಸಹ ಗಂಟಲುನೋವು ಕಾಣಿಸಿಕೊಂಡಿದ್ದರಿಂದ ತೀವ್ರ ನಿಗಾವಹಿಸಲಾಗಿತ್ತು. ಅಲ್ಲದೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಪರಾರಿಯಾಗಿದ್ದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.ಇದೀಗ ಮದ್ಯಾಹ್ನ ಆತನನ್ನು ಪತ್ತೆ ಮಾಡಿ ಮತ್ತೆ ಐಸೋಲೇಷನ್ಗೆ ದಾಖಲು ಮಾಡಿರುವುದು ಎಲ್ಲರಿಗೂ ನಿರಾಳ ತಂದಿದೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com