ಬೆಂಗಳೂರು: ನಗರದ ಚಿಕ್ಕಪೇಟೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಸುಮಾರು 21 ಕೋಟಿ ರೂ ಮೌಲ್ಯ 60ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಅದಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ವಿವಿಧ ಪ್ರದೇಶಗಳಲ್ಲಿದ್ದ ಲೆಕ್ಕಕ್ಕೆ ಸಿಗದ ಸುಮಾರು 60ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ಚಿನ್ನಾಭರಣಗಳ ಹೋಲ್ ಸೇಲ್ ವ್ಯಾಪಾರ ಸ್ಥಳಗಳಾದ ರಂಗನಾಥ ಮ್ಯಾನ್ಷನ್ ಮತ್ತು ಸಕಲಾಜೀ ಮಾರ್ಕೆಟ್ ಮೇಲೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಲೆಕ್ಕವಿಲ್ಲದ ಸುಮಾರು 21 ಕೋಟಿ ರೂ ಮೌಲ್ಯ 60ಕೆಜಿ ಚಿನ್ನಾಭರಣಗಳ ಪತ್ತೆಯಾಗಿತ್ತು.
ಕೂಡಲೇ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ 1.3 ಕೋಟಿ ರೂ ಮೌಲ್ಯದ ಜಿಎಸ್ ಟಿ ತೆರಿಗೆ ವಂಚನೆ ಕೂಡ ಸೇರಿದೆ ಎನ್ನಲಾಗಿದೆ.
Advertisement