ಬೆಂಗಳೂರು: ನಗರದಲ್ಲಿ ಕಿಡಿಗೇಡಿಗಳು ಬೀದಿನಾಯಿಗಳಿಗೆ ವಿಷ ಹಾಕಿರುವ ದಾರುಣ ಘಟನೆ ನಡೆದಿದ್ದು, ವಿಷಾಹಾರ ಸೇವಿಸಿದ 8 ನಾಯಿಗಳ ಪೈಕಿ 3 ನಾಯಿಗಳು ಸಾವನ್ನಪ್ಪಿ, ಐದರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ಜೆಪಿ.ನಗರದ 8ನೇ ಹಂತದ ಎಂ.ಎಸ್.ರಾಮಯ್ಯ ಸಿಟಿ ಬಳಿ ಭಾನುವಾರ ರಾತ್ರಿ 8 ನಾಯಿಗಳಿಗೆ ಕಿಡಿಗೇಡಿಗಳು ವಿಷಾಹಾರ ಹಾಕಿದ್ದಾರೆ. ವಿಷಾಹಾರ ಸೇವಿಸಿದ 3 ನಾಯಿಗಳು ಸಾವನ್ನಪ್ಪಿದ್ದು, ಐದು ನಾಯಿಗಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ಭಾನುವಾರ ರಾತ್ರಿ ಮಾಂಸ ಆಹಾರದಲ್ಲಿ ವಿಷ ಮಿಶ್ರಣ ಮಾಡಿರುವ ಸಾಧ್ಯತೆ ಇದೆ. ಸೋಮವಾರ ಬೆಳಿಗ್ಗೆ ನಾಯಿಗಳಿಗ ಆಹಾರ ಹಾಕಲು ಹೋದಾಗ ನಾಯಿಗಳು ಸಾವನ್ನಪ್ಪಿರುವುದು ತಿಳಿದುಬಂದಿದೆ. ನಾಯಿಗಳು ಬಾಯಿಯಿಂದ ಜೊಲ್ಲು, ರಕ್ತಸ್ರಾವವಾಗುತ್ತಿತ್ತು. ನಾಲ್ಕು ನಾಯಿಗಳ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷ ಹಾಕಿರುವ ಕಿಡಿಕೇಡಿಗಳ ಪತ್ತೆಗೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Advertisement