ನಿಗದಿತ ಸಂಖ್ಯೆಯ ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ಸಚಿವ ಸುರೇಶ್ ಕುಮಾರ್
ಕೊರೋನಾ ರೋಗಿಗಳಿಗೆ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಖಾಸಗಿ ಆಸ್ಪತ್ರೆಗಳು ಇಲಾಖೆಗೆ ಒದಗಿಸಬೇಕಾದ ನಿಗದಿತ ಹಾಸಿಗೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದು,ವಿಳಂಬ ಇದೇ ರೀತಿ ಮುಂದುವ ರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
Published: 13th July 2020 08:01 PM | Last Updated: 13th July 2020 08:01 PM | A+A A-

ಸುರೇಶ್ ಕುಮಾರ್ ಸಭೆ
ಬೆಂಗಳೂರು: ಕೊರೋನಾ ರೋಗಿಗಳಿಗೆ ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಖಾಸಗಿ ಆಸ್ಪತ್ರೆಗಳು ಇಲಾಖೆಗೆ ಒದಗಿಸಬೇಕಾದ ನಿಗದಿತ ಹಾಸಿಗೆಗಳನ್ನು ನೀಡಲು ವಿಳಂಬ ಮಾಡುತ್ತಿದ್ದು,ವಿಳಂಬ ಇದೇ ರೀತಿ ಮುಂದುವ ರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಅವರು ನಡೆಸಿದ ಬೆಂಗಳೂರು ವಲಯವಾರು ಪರಿಶೀಲನೆಯ ವಿಡಿಯೋ ಸಂವಾದದಲ್ಲಿ ಬೊಮ್ಮನಹಳ್ಳಿ ವಲಯ ಕೊರೋನಾ ಉಸ್ತುವಾರಿ ಯಾಗಿ ನಿಯುಕ್ತಿಗೊಂಡಿರುವ ಅವರು ಮಾತನಾಡಿ,ಈ ಕುರಿತು ನಿನ್ನೆ ಖಾಸಗಿ ವಲಯದ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದು,ತಕ್ಷಣವೇ ನಿಗದಿತ ಬೆಡ್ ಗಳನ್ನು ಒದಗಿಸಬೇಕೆಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.
ಈ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ನೀಡಿರುವ ಸುರೇಶ್ ಕುಮಾರ್ ಅವರು, 'ಇಂದು ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಸದಸ್ಯರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿ ಕೊರೋನಾ ಸೋಂಕು ಹರಡುವ ವಿರುದ್ಧ ಕಾರ್ಯತಂತ್ರ ರೂಪಿಸಲು ಬೂತ್ ಮಟ್ಟದಲ್ಲಿ ತಂಡಗಳನ್ನು ರಚಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಯಿತು. ಸಭೆಯಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಶಾಸಕರುಗಳಾದ ಸತೀಶ್ ರೆಡ್ಡಿ, ಎಂ. ಕೃಷ್ಣಪ್ಪ, ಉಸ್ತುವಾರಿ ಅಧಿಕಾರಿ ಮಣಿವಣ್ಣನ್, ವಲಯದ ಜಂಟಿ ಆಯುಕ್ತ ರಾಮಕೃಷ್ಣ, ಡಿಸಿಪಿ ಶ್ರೀನಾಥ್ ಜೋಷಿ...ಮತ್ತಿತರರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ.
ಬೊಮ್ಮನಹಳ್ಳಿ ವಲಯದ ಕೋವಿಡ್ 19 ನಿಯಂತ್ರಣ ಕುರಿತ ಸಭೆಯಲ್ಲಿ ನನ್ನೊಡನೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ #ತೇಜಸ್ವಿ_ಸೂರ್ಯ, ಶಾಸಕರುಗಳಾದ ಶ್ರೀ #ಸತೀಶ್_ರೆಡ್ಡಿ ಹಾಗೂ ಶ್ರೀ ಎಂ #ಕೃಷ್ಣಪ್ಪ ಮತ್ತು ಈ ವಲಯದ ಉಸ್ತುವಾರಿ ಅಧಿಕಾರಿಯಾದ ಶ್ರೀ #ಮಣಿವಣ್ಣನ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಈ ವಲಯದ ಪೊಲೀಸ್ ಡಿಸಿಪಿ ಉಪಸ್ಥಿತರಿದ್ದರು. pic.twitter.com/uwJMgOYYAb
— S.Suresh Kumar, Minister - Govt of Karnataka (@nimmasuresh) July 12, 2020