ರಾಯಚೂರು, ಬೆಂಗಳೂರು, ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿಗೆ ಪ್ರಗತಿಪರ ರೈತರ ನೇಮಕ

ರಾಯಚೂರು, ಧಾರವಾಡ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪ್ರಗತಿಪರರೈತರನ್ನು ನೇಮಿಸಲಾಗಿದೆ. ರಾಜ್ಯಪಾಲರು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯದ ಉಪಕುಲಪತಿಗಳ ಆದೇಶದನ್ವಯಈ ನೇಮಕಾತಿಯಾಗಿದೆ. 
ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ
ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ

ಬೆಂಗಳೂರು: ರಾಯಚೂರು, ಧಾರವಾಡ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪ್ರಗತಿಪರ
 ರೈತರನ್ನು ನೇಮಿಸಲಾಗಿದೆ. ರಾಜ್ಯಪಾಲರು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯದ ಉಪಕುಲಪತಿಗಳ ಆದೇಶದನ್ವಯ
 ಈ ನೇಮಕಾತಿಯಾಗಿದೆ. 

ರಾಯಚೂರು ವಿವಿಗೆ ಕೊಪ್ಪಳದ ಮಹಂತೇಶಗೌಡ ಪಾಟೀಲ್ (ಸಾ.ವರ್ಗ), ಜಿ.ಶ್ರೀಧರ್ ಕೇಸರ ಹಟ್ಟಿ (ಸಾ.ವರ್ಗ)-ಕೊಪ್ಪಳ ಗಂಗಾವತಿ ಜಿಲ್ಲೆ, ಸುನಿಲ್ (ಪರಿಶಿಷ್ಟ ಜಾತಿ) -ರಾಯಚೂರು,  ಬೆಂಗಳೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ದಯಾನಂದ (ಸಾ.ವರ್ಗ)-ಬೆಂಗಳೂರು, ಸುರೇಶ್ ಎಂ. (ಸಾ.ವರ್ಗ)-ಬೆಂಗಳೂರು,  ಶ್ರೀರಾಮ (ಪ.ಜಾ)- ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರನ್ನು ನೇಮಕ ಮಾಡಲಾಗಿದೆ. 

ಧಾರವಾಡ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಯಲ್ಲನಗೌಡ ನಿಂಜನಗೌಡ ಪಾಟೀಲ್ (ಸಾಮಾನ್ಯ ವರ್ಗ)- ಕಲ್ಲಟಗಿ ತಾಲ್ಲೂಕು, ಧಾರವಾಡ ಜಿಲ್ಲೆ, ಮಲ್ಲೇಶ ಪಿ. (ಪ.ಜಾತಿ) - ವಿಜಯಪುರ ಇವರನ್ನು ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com