ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ತುಸು ತಗ್ಗಿದಂತೆ ಕಂಡಿದ್ದ ಕೊರೋನಾ ಸೋಮವಾರ ಮತ್ತೆ ಅಬ್ಬರಿಸಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ ಬರೋಬ್ಬರಿ 476 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಿದೆ.
ರಾಜ್ಯದಲ್ಲಿ ಕಳೆದ 4 ದಿನಗಳಿಂದ 400ರ ಸಮೀಪದಲ್ಲಿದ್ದ ಸಾವಿನ ಪ್ರಮಾಣ ಒಮ್ಮೆಲೆ 476ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದ ಒಂದರಲ್ಲಿಯೇ 239 ಮಂದಿ ಮರಣವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 22,313ಕ್ಕೆ ಏರಿಕೆಯಾಗಿದ್ದರೆ, ಬೆಂಗಳೂರಿನಲ್ಲಿ 9,722ಕ್ಕೆ ತಲುಪಿದೆ.
ಇದೀಗ ರಾಜ್ಯದ ಮರಣ ಪ್ರಮಾಣ ಶೇ.0.99ರಷ್ಟಿದ್ದರೆ, ಬೆಂಗಳೂರು ನಗರದ ಸಾವಿನ ಪ್ರಮಾಣ ಶೇ.0.90ರಿಂದ ಶೇ.0.91ಕ್ಕೆ ಏರಿಕೆಯಾಗಿದೆ.
ಇನ್ನು ಒಂದೇ ದಿನ 34,635 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 16.16 ಲಕ್ಷಕ್ಕೆ ಏರಿಕೆಯಾಗಿದೆ. ಈ ಮಧ್ಯೆ 6.03 ಲಕ್ಷ ಸಕ್ರಿಯ ಪ್ರಕರಣಗಳಿವೆ.
Advertisement