ಬೆಂಗಳೂರು: ಐಟಿ ನಗರಿ ಎಂದೇ ಹೆಸರಾದ ಬೆಂಗಳೂರಿನ ಪ್ರಮುಖ ರೈಲುನಿಲ್ದಾಣವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಪೊಲೀಸರ ಕಾರ್ಯವನ್ನು ಫೇಷಿಯಲ್ ರೆಕಾಗ್ನಿಷನ್ ತಂತ್ರಜ್ಞಾನ ಮಾಡಿದೆ. 90 ದಿನಗಳ ಹಿಂದೆ ಫೇಷಿಯಲ್ ರೆಕಾಗ್ನಿಷನ್ ವ್ಯವಸ್ಥೆ ಅಳವಡಿಕೆಯಾದ ದಿನದಿಂದ ಇದುವರೆಗೂ 47 ಮಂದಿ ರೌಡಿ ಶೀಟರ್ ಗಳನ್ನು ರೈಲು ನಿಲ್ದಾಣದ ಆವರಣದಲ್ಲಿ ಪತ್ತೆ ಹಚ್ಚಲಾಗಿದೆ ಎನ್ನುವುದು ಗಮನಾರ್ಹ.
ಇದೇ ಮೊದಲ ಬಾರಿಗೆ ಫೇಷಿಯಲ್ ರೆಕಾಗ್ನಿಷನ್ ತಂತ್ರಜ್ಞಾನವನ್ನು(ಎಫ್ ಆರ್ ಎಸ್) ಅಳವಡಿಸಲಾಗಿದೆ. ದೇಶದಲ್ಲೇ ಎಫ್ ಆರ್ ಎಸ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ರೈಲು ನಿಲ್ದಾಣ ಹೊಂದಿರುವ ಮೊದಲ ರಾಜ್ಯ ಎನ್ನುವ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ.
ಇದೊಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವಾಗಿದ್ದು, ವ್ಯಕ್ತಿಯ ಮುಖದ ಆಕಾರ, ಲಕ್ಷಣಗಳನ್ನು ಆಧರಿಸಿ ಕಾರ್ಯಾಚರಿಸುತ್ತದೆ ಎಂದು ಸೌತ್ ವೆಸ್ಟ್ ರೈಲ್ವೇಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಾ ಅವರು ತಿಳಿಸಿದ್ದಾರೆ.
ಗಂಟೆಗೆ 1000 ಕಿ.ಮೀ ಚಲಿಸುವ ರೈಲು ಮಾದರಿಗೆ ಯುರೋಪಿಯನ್ ಪ್ರಶಸ್ತಿ: ಭಾರತೀಯ ವಿದ್ಯಾರ್ಥಿಗಳ ಸಾಧನೆ
ನಮ್ಮ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಡನೆ ಏಕೆ?: ಸಚಿವ ಸುನೀಲ್ ಕುಮಾರ್
ಹೊಸಕೋಟೆ ಪಟ್ಟಣಕ್ಕೆ ಮೆಟ್ರೊ ರೈಲು ಸಂಚಾರ ವಿಸ್ತರಿಸಿ: ಸಚಿವ ಎಂಟಿಬಿ ನಾಗರಾಜ್
ರೈಲು ನಿಲ್ದಾಣ, ಅಮಿತಾಬ್ ಬಚ್ಚನ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ: ಇಬ್ಬರ ಬಂಧನ
Advertisement