ಬೆಂಗಳೂರು: ಮನಃ ಪರಿವರ್ತನಾ ಕೇಂದ್ರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ದಾಳಿ ಮಾಡಿ ಜೂಜಾಡುತ್ತಿದ್ದ 14 ಜನರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ತುಂಗಾನಗರದಲ್ಲಿರುವ ಶ್ರೀ ಮಹದೇಶ್ವರ ಡಿ ಅಡಿಕ್ಷನ್ ಸೆಂಟರ್ ಮೇಲೆ ಪೊಲೀಸರು ದಾಳಿ ಮಾಡಿ 28 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಹೊನ್ನಪ್ಪ ಎಂಬಾತನಿಗೆ ಸೇರಿದ ಡಿ ಅಡಿಕ್ಷನ್ ಸೆಂಟರ್ ಇದಾಗಿದ್ದು, ಅವರ ಸಂಬಂಧಿ ಅಶೋಕ್ ಈ ಸೆಂಟರ್ನಲ್ಲಿ ಮ್ಯಾನೇಜರ್ ಆಗಿ ಕಾರ್ನಿರ್ವಹಿಸುತ್ತಿದ್ದರು. ಸದ್ಯ ಅಶೋಕ್ ಮತ್ತು ಹೊನ್ನಪ್ಪರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಗ್ಯಾಂಬಲಿಂಗ್ನಲ್ಲಿ ತೊಡಗಿದ್ದ 14 ಮಂದಿ ಪತ್ತೆಯಾಗಿದ್ದು, ಕೆಪಿ ಆ್ಯಕ್ಟ್ ಹಾಗೂ ಎನ್ಡಿಎಂಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement