ಬೆಂಗಳೂರು: ಹೋಟೆಲಿನಲ್ಲಿ ಗಲಾಟೆ; ಭೀಮಾ ಜ್ಯುವೆಲರಿ ಮಾಲೀಕನ ಪುತ್ರ ಪೊಲೀಸ್ ವಶಕ್ಕೆ

ನಗರದ ಪ್ರತಿಷ್ಠಿತ ಹೋಟೆಲ್ ಒಂದರ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಿಂದ ಭೀಮಾ ಜುವೆಲರಿ ಮಾಲೀಕರ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್ ಒಂದರ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಿಂದ ಭೀಮಾ ಜುವೆಲರಿ ಮಾಲೀಕರ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಗಲಾಟೆ ನಡೆದಿದೆ. ಆರೋಪಿ ವಿಷ್ಣುಭಟ್ ಸದ್ಯ ಪೊಲೀಸರ ವಶದಲ್ಲಿದ್ದಾರೆ. ರಾಯಲ್ ಆರ್ಕೇಡ್ ಹೋಟೆಲಿನಲ್ಲಿ ಗಲಾಟೆ ನಡೆದಿದೆ. 

ಹೋಟೆಲಿಗೆ ಹೋದ ವಿಷ್ಣುಭಟ್ ಅಲ್ಲಿನ ಪ್ರಾಥಮಿಕ ನಿಯಮವಳಿಗಳನ್ನು ಅನುಸರಿಸಿಲ್ಲ. ಹೆಸರು, ಯಾರನ್ನು ಭೇಟಿಯಾಗಲು ಬಂದಿರುವುದು. ಎಷ್ಟನೇ ರೂಮ್, ಪೋನ್ ನಂಬರ್ ಇತ್ಯಾದಿ ವಿವರಗಳನ್ನು ಭರ್ತಿ ಮಾಡಲು ಭದ್ರತಾ ಸಿಬ್ಬಂದಿ ಸೂಚಿಸಿದ್ದಾರೆ.

ಇದಕ್ಕೆ ಒಪ್ಪದ ರೂಂಗೆ ಹೋಗಲು ಯತ್ನಿಸಿದಾಗ ವಿಷ್ಣುಭಟ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಹೋಟೆಲ್ ಸಿಬ್ಬಂದಿ ಭೀಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ವಿಷ್ಣುಭಟ್ ನನ್ನು ಪೊಲೀಸರು ಬಂಧಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com