ಸಹಕಾರಿ ಧುರೀಣ  ಬಿ.ಎಲ್.ಲಕ್ಕೇಗೌಡ ನಿಧನ, ಮಾಜಿ ಪ್ರಧಾನಿ ದೇವೇಗೌಡ ಸಂತಾಪ

ಸಹಕಾರಿ ದುರೀಣ, ದಕ್ಷ ಅಧಿಕಾರಿ, ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕ ಬಿ.ಎಲ್ . ಲಕ್ಕೇಗೌಡ ಇಂದು ನಿಧನ ಹೊಂದಿದರು.
ಬಿಎಲ್ ಲಕ್ಕೇಗೌಡ
ಬಿಎಲ್ ಲಕ್ಕೇಗೌಡ

ಬೆಂಗಳೂರು: ಸಹಕಾರಿ ದುರೀಣ, ದಕ್ಷ ಅಧಿಕಾರಿ, ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕ ಬಿ.ಎಲ್ . ಲಕ್ಕೇಗೌಡ ಇಂದು ನಿಧನ ಹೊಂದಿದರು.

ಈ ಸಂಬಂಧ ಮಾಜಿ ಪ್ರಧಾನಿ, ಜೆಡಿಎಸ್ ಪರಮೊಚ್ಚ ನಾಯಕ ಹೆಚ್.ಡಿ. ದೇವೇಗೌಡ, ಟ್ವಿಟ್ ಮಾಡಿ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕರಾಗಿದ್ದ ಲಕ್ಕೇಗೌಡರು ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಲಕ್ಕೇಗೌಡ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿ, ದಕ್ಷ ಅಧಿಕಾರಿಯಾಗಿ, ಸಹಕಾರಿ ಧುರೀಣರಾಗಿ ಬದುಕನ್ನು ಸಮಾಜ ಸೇವೆಗೇ ಮೀಸಲಿಟ್ಟಿದ್ದರು. ಅವರ ಕುಟುಂಬಕ್ಕೆ ಆಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com