ರಾಮನಗರ: ಜಿಲ್ಲೆಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಎಡೆಬಿಡದೆ ಸುರಿದ ಮಳೆಗೆ ದನದ ಕೊಟ್ಟಿಗೆ ಕುಸಿದು ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಮೃತರನ್ನು ನೇಪಾಳ ಮೂಲದ ಇಶಿಕಾ (3) ಮತ್ತು ಆಕೆಯ ಸೋದರ ಸಂಬಂಧಿ ಫರ್ವೀನ್ ಸುನಾರ್ (4) ಎಂದು ಗುರುತಿಸಲಾಗಿದೆ. ಮಾಗಡಿ ತಾಲೂಕಿನ ಸೋಲೂರಿನ ಕೂಡ್ಲೂರು ಕ್ರಾಸ್ ಬಳಿ ಭಾನುವಾರ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ.
ಇಶಿಕಾ ತನ್ನ ತಂದೆ ಮತ್ತು ತಾಯಿ ಕೆಲಸ ಮಾಡುತ್ತಿದ್ದ ಫಾರ್ಮ್ಹೌಸ್ನಲ್ಲಿ ಶೆಡ್ನಲ್ಲಿ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ, ಅವರನ್ನು ಭೇಟಿ ಮಾಡಲು ಅಜ್ಜಿ ಮೀನಾ ಮತ್ತು ಸೋದರ ಸಂಬಂಧಿ ಫರ್ವೀನ್ ಸುನರ್ ಬೆಂಗಳೂರಿನಿಂದ ಬಂದಿದ್ದರು. ಇಬ್ಬರು ಮಕ್ಕಳಾದ ಇಶಿಕಾ ತಾಯಿ ಮೋನಿಶಾ ಮತ್ತು ಮೀನಾ ಶೆಡ್ನಲ್ಲಿ ಮಲಗಿದ್ದರೆ, ಆಕೆಯ ತಂದೆ ಹೊರಗೆ ಮಲಗಿದ್ದರು.
ನಿರಂತರ ಮಳೆಯಿಂದಾಗಿ ಗಂಗರಂಗಮ್ಮ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಯ ಗೋಡೆಯು ಪಕ್ಕದಲ್ಲೇ ಇದ್ದ ಶೆಡ್ ಮೇಲೆ ಕುಸಿದಿದೆ. ಇದರಿಂದಾಗಿ ನಿದ್ರೆಯಲ್ಲಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೀನಾ ಮತ್ತು ಮೋನಿಷಾ ಎಂಬುವವರಿಗೆ ಗಾಯಗಳಾಗಿದ್ದು, ಗ್ರಾಮಸ್ಥರು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದ ಗಂಗರಂಗಮ್ಮ ಅವರ ವಿರುದ್ಧ ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement