ಬೆಂಗಳೂರು: ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿದ ಮಹಿಳೆಯೊಬ್ಬರು ಉದ್ಯಮಿಗೆ 2.38 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.
ಕನಕಪುರ ಮುಖ್ಯರಸ್ತೆಯ ಹೊಸಪಾಳ್ಯದ ನಿವಾಸಿ ಎಂ.ಕೃಷ್ಣ ಎಂಬುವರು ವಂಚನೆಗೊಳಗಾಗಿದ್ದಾರೆ. ತಮ್ಮ ಮಗಳನ್ನು ಇಂಜಿನಿಯರಿಂಗ್ ಕಾಲೇಜಿಗೆ ಸೇರ್ಪೆಡೆಗೊಳಿಸಲು ಕೃಷ್ಣ ಅವರು ಹುಡುಕಾಟ ನಡೆಸುತ್ತಿದ್ದಾಗ ಪರಿಚಯಸ್ಥರೊಬ್ಬರ ಮನೆಯಲ್ಲಿ ಆರೋಪಿತ ಮಹಿಳೆಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಹಣ ಪಡೆದುಕೊಂಡ ಮಹಿಳೆ ಸೀಟು ದೃಢೀಕರಿಸುವ ಪತ್ರವನ್ನು ನೀಡಿದ್ದಾರೆ.
ಪತ್ರವನ್ನು ಹಿಡಿದು ಕೃಷ್ಣ ಅವರು ಕಾಲೇಜಿಗೆ ತೆರಳಿದಾಗ ಅದು ನಕಲಿ ಪತ್ರ ಎಂಬುದು ತಿಳಿದುಬಂದಿದೆ. ಈ ವೇಳೆ ಕೃಷ್ಣ ಅವರು ಮಹಿಳೆಯನ್ನು ಸಂಪರ್ಕಿಸಿದ್ದು, ಮಹಿಳೆ ಅಪಘಾತವಾಗಿರುವುದಾಗಿ ಹೇಳಿ ತಪ್ಪಿಸಿಕೊಂಡಿದ್ದಾಳೆ. ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ.
ಈ ಸಂಬಂಧ ಕೃಷ್ಣ ಅವರು ಕಗ್ಗಲಿಪುರ ಪೊಲೀಸರಿಗೆ ಬುಧವಾರ ದೂರು ನೀಡಿದ್ದಾರೆ. ಮಹಿಳೆ ನಮಗೆ ಶೈಕ್ಷಣಿಕ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಸಹಿ ಮಾಡಿದ ಪತ್ರವನ್ನು ನೀಡಿದ್ದರು. ಮಹಿಳೆಯನ್ನು ಸಂಪರ್ಕಿಸಿದಾಗ ಆಕೆ ನಮಗೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಂತರ ಪತ್ರವನ್ನು ಹಿಡಿದು ಕಾಲೇಜಿನಲ್ಲಿ ಪರಿಶೀಲಿಸಲು ಹೋಗಿದ್ದೆವು. ಈ ವೇಳೆ ಅದು ನಕಲಿ ಎಂಬುದನ್ನು ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದರು. ಕಾರ್ಯದರ್ಶಿಯ ಸಹಿ ಕೂಡ ನಕಲಿಯಾಗಿತ್ತು. ಹಣ ವಾಪಸ್ ಕೇಳಲು ಹೋದಾಗಲೆಲ್ಲಾ ಮಹಿಳೆಯ ನಮ್ಮಿಂದ ತಪ್ಪಿಸಿಕೊಳ್ಳುತ್ತಿದ್ದಾಳೆಂದು ದೂರಿನಲ್ಲಿ ಕೃಷ್ಣ ಅವರು ಹೇಳಿಕೊಂಡಿದ್ದಾರೆ.
ಆರೋಪಿತ ಮಹಿಳೆಯರು ಈಗಾಗಲೇ ಹಲವರಿಗೆ ವಂಚಿಸಿದ್ದಾಳೆಂದು ಹೇಳಲಾಗುತ್ತಿದ್ದು, ಹಲವು ಪೊಲೀಸ್ ಠಾಣೆಗಳಲ್ಲಿ ಆಕೆಯ ವಿರುದ್ಧ ದೂರುಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ದೂರುದಾರರು ಎಚ್ಚರಿಕೆ ವಹಿಸಬೇಕಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಮಹಿಳೆ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406 ಮತ್ತು 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement