ಸಿಎಂ ಬೊಮ್ಮಾಯಿ ಸಭೆ
ಸಿಎಂ ಬೊಮ್ಮಾಯಿ ಸಭೆ

ಮುಂಗಾರು ಆರಂಭದಿಂದ ಈವರೆಗೂ ಮಳೆಯಿಂದ 74 ಮಂದಿ ಸಾವು: ರಾಜ್ಯಾದ್ಯಂತ ಸಿಎಂ ಬೊಮ್ಮಾಯಿ ತೀವ್ರ ನಿಗಾ

ರಾಜ್ಯದ ಹಲವೆಡೆ ಭಾರೀ ಮಳೆ ಮುಂದುವರಿದಿದ್ದು, ಮಳೆ ಹಾನಿಯಿಂದಾಗಿ ಈ ವರೆಗೂ 74 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
Published on

ಬೆಂಗಳೂರು: ರಾಜ್ಯದ ಹಲವೆಡೆ ಭಾರೀ ಮಳೆ ಮುಂದುವರಿದಿದ್ದು, ಮಳೆ ಹಾನಿಯಿಂದಾಗಿ ಈ ವರೆಗೂ 74 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಕುರಿತು ವಿಪತ್ತು ನಿರ್ವಹಣಾ ಸಮಿತಿ ಆಯುಕ್ತ ಮನೋಜ್ ರಾಜನ್ ಮಾತನಾಡಿ, ಜೂನ್ ಆರಂಭದಲ್ಲಿ ಮುಂಗಾರು ಪ್ರಾರಂಭವಾದಾಗಿನಿಂದ, 74 ಜನರು ಪ್ರಾಣ ಕಳೆದುಕೊಂಡಿದ್ದಾರೆ, 36 ಜನರು ಗಾಯಗೊಂಡಿದ್ದಾರೆ ಮತ್ತು 1.38 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಕೆಟ್ಟದಾಗಿ ಹಾನಿಗೊಳಗಾಗಿದೆ. 14 ಜಿಲ್ಲೆಗಳಲ್ಲಿ 161 ಗ್ರಾಮಗಳಲ್ಲಿ 21,727 ಜನರು ತೊಂದರೆಗೀಡಾಗಿದ್ದು, 8,197 ಜನರನ್ನು ಸ್ಥಳಾಂತರಿಸಲಾಗಿದೆ. ಒಟ್ಟು 7,386 ಜನರು 36 ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.’’ ಅವರು 11,768 ಕಿಮೀ ರಸ್ತೆಗಳು ಮತ್ತು 1,152 ಸೇತುವೆಗಳು ಮತ್ತು ಮೋರಿಗಳು ಹಾನಿಗೊಳಗಾಗಿದ್ದು, ದುರಸ್ತಿ ಮಾಡಲು ತಿಂಗಳುಗಳು ಬೇಕಾಗಬಹುದು ಎಂದರು.

ಮುಖ್ಯವಾಗಿ ಕಳಪೆ ನಿರ್ವಹಣೆಯಿಂದಾಗಿ ಒಟ್ಟು 4,561 ಶಾಲೆಗಳು ಮತ್ತು 2,249 ಅಂಗನವಾಡಿಗಳ ಸೇವೆಗಳು ಬಾಧಿತವಾಗಿವೆ. ಒಟ್ಟು ಹಾನಿಗೊಳಗಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ 122ಗಳಾಗಿದ್ದು, 1,7066 ವಿದ್ಯುತ್ ಕಂಬಗಳು ಮತ್ತು 472 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿರುವುದರಿಂದ 500 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸುಮಾರು 95 ಸ್ಥಳಗಳಲ್ಲಿ ಸಣ್ಣ ನೀರಾವರಿ ಟ್ಯಾಂಕ್‌ಗಳು ಹಾನಿಗೊಳಗಾಗಿವೆ ಎಂದು  ಹೇಳಿದರು.

ಅಂತೆಯೇ, “ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳಲ್ಲಿ, ರಸ್ತೆಗಳನ್ನು ತೆರವುಗೊಳಿಸಲು ಮತ್ತು ದುರ್ಬಲ ಪ್ರದೇಶಗಳನ್ನು ಸಮೀಕ್ಷೆ ಮಾಡಲು ತಂಡಗಳನ್ನು ನೇಮಿಸಲಾಗಿದೆ. ಈ ದುರ್ಬಲ ಪ್ರದೇಶಗಳಲ್ಲಿ ವಸತಿಪ್ರದೇಶಗಳಿದ್ದರೆ, ಅಲ್ಲಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.’’ ಒಟ್ಟಾರೆಯಾಗಿ, 665 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ, 3,000 ಕ್ಕೂ ಹೆಚ್ಚು ಗಣನೀಯ ಹಾನಿ ಮತ್ತು 17,750 ಭಾಗಶಃ ಹಾನಿಯಾಗಿದೆ. ಸಂಪೂರ್ಣ ಹಾನಿಗೀಡಾದ ಮನೆಗಳ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ರೂ.5 ಲಕ್ಷ ನೀಡಲಿದ್ದು, ಎಸ್‌ಡಿಆರ್‌ಎಫ್ ನಿಯಮದಡಿ ರೂ.4.04 ಲಕ್ಷ, ಎಸ್‌ಡಿಆರ್‌ಎಫ್ ನಿಯಮಕ್ಕಿಂತ ರೂ.2.04 ಲಕ್ಷಕ್ಕಿಂತ ಹೆಚ್ಚಿನ ಹಾನಿಯಿರುವ ಮನೆಗಳಿಗೆ ರೂ.3 ಲಕ್ಷ ಹಾಗೂ ಉಳ್ಳವರಿಗೆ ರೂ.50,000 ನೀಡಲಿದೆ. ಆಂಶಿಕ ಹಾನಿಯಾಗಿದ್ದು, ಇದು ರೂಢಿಗಿಂತ 44,800 ರೂ. ಹೆಚ್ಚುವರಿ ಮೊತ್ತವನ್ನು ಸರ್ಕಾರ ಭರಿಸುತ್ತಿದೆ ಎಂದು ರಾಜನ್ ಮಾಹಿತಿ ನೀಡಿದರು.

ಕೊಡಗು, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈಗಾಗಲೇ ನಾಲ್ಕು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಇದಲ್ಲದೇ ಒಂದು ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟಿದೆ. ಅಲ್ಲದೆ, ಈಗಾಗಲೇ ಆರು ಎಸ್‌ಡಿಆರ್‌ಎಫ್ ತಂಡಗಳನ್ನು ಬೆಳಗಾವಿ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ನಿಯೋಜಿಸಲಾಗಿದೆ,'' ಎಂದು ಅವರು ಹೇಳಿದರು.

ಸಿಎಂ ತೀವ್ರ ನಿಗಾ
ಅಂತೆಯೇ ಮಳೆ ಹಾನಿ ಕುರಿತು ಸಿಎಂ ಬೊಮ್ಮಾಯಿ ಅವರು ತೀವ್ರ ನಿಗಾ ಇಟ್ಟಿದ್ದು, ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.  ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ ದ್ವಿಚಕ್ರವಾಹನ ಸವಾರ ಶೆಟ್ಟಿ ಮರದಡಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ರಾಜನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com