ಬೆಂಗಳೂರು: ಗುಂಡಿಗಳನ್ನು ತುಂಬುವುದು ಮತ್ತು ರಸ್ತೆಗಳ ಡಾಂಬರೀಕರಣವು ಪರಿಣಾಮಕಾರಿ ರೀತಿಯಲ್ಲಿ ನಡೆಯುತ್ತಿದ್ದು, ನವೆಂಬರ್ 10 ರೊಳಗೆ ಬೆಂಗಳೂರು ನಗರ ಗುಂಡಿ ಮುಕ್ತವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಭರವಸೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ 1,000 ರಿಂದ 1,500 ಗುಂಡಿಗಳನ್ನು ತುಂಬಲಾಗುತ್ತಿದ್ದು, ಇದರಿಂದ ನವೆಂಬರ್ 6 ರ ವೇಳೆಗೆ ನಾವು ಗುರಿಯ 95 ರಷ್ಟು ಪೂರೈಸಲು ಸಾಧ್ಯವಾಗುತ್ತದೆ. ನ.10ರೊಳಗೆ ನಗರದ ಎಲ್ಲ ಗುಂಡಿಗಳನ್ನು ತುಂಬಿಸಲಾಗುವುದು ಎಂದು ಹೇಳಿದರು.
ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ವಿಳಂಬವಾದರೆ ಕ್ರಮ ಜರುಗಿಸುವುದಾಗಿ ಇದೇ ವೇಳೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
Advertisement