ಅಪಾರ್ಟ್ ಮೆಂಟ್ ನಲ್ಲಿ ಪಿಎಸ್ಐ ಗಲಾಟೆ, ನಿವಾಸಿಗಳ ಮೇಲೆ ಹಲ್ಲೆ; ವಿಡಿಯೋ ವೈರಲ್

ಅಪಾರ್ಟ್ ಮೆಂಟ್ ನಿವಾಸಿಗಳ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಆಪಾರ್ಟ್ ಮೆಂಟ್ ನಲ್ಲಿ ಪಿಎಸ್ಐ ಗಲಾಟೆ
ಆಪಾರ್ಟ್ ಮೆಂಟ್ ನಲ್ಲಿ ಪಿಎಸ್ಐ ಗಲಾಟೆ

ಬೆಂಗಳೂರು: ಅಪಾರ್ಟ್ ಮೆಂಟ್ ನಿವಾಸಿಗಳ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಪರಪ್ಪನ ಅಗ್ರಹಾರ ಠಾಣೆ PSI ಗಂಗಾಧರ್​ ರಸ್ತೆಯಲ್ಲಿ ಗೂಂಡಾವರ್ತನೆ ತೋರಿದ್ದು, ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ಅಪಾರ್ಟ್‌ಮೆಂಟ್​ ನಿವಾಸಿಗಳು (Apartment Resident) ಆಕ್ರೋಶ ಹೊರ ಹಾಕಿದ್ದಾರೆ. ನೀರಿನ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಹಾವೀರ್ ಆರ್ಕೇಡ್ ಅಪಾರ್ಟ್​ಮೆಂಟ್ (Mahaveer Arcade Apartment) ನಿವಾಸಿ ಮೇಲೆ PSI ಗಂಗಾಧರ್ ಹಲ್ಲೆ ಮಾಡಿದ್ದಾರೆ. ಹಲ್ಲೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ ಆಗಿದ್ದು, ಪೊಲೀಸ್ ಅಧಿಕಾರಿ (Police Officer) ವರ್ತನೆ ಬಗ್ಗೆ ಸಾರ್ವಜನಿಕರು ಸಹ ಕಿಡಿಕಾರಿದ್ದಾರೆ.

ಹೊಸ ರೋಡ್ ಚೂಡಸಂದ್ರದ ಬಳಿ ಇರುವ ಮಹಾವೀರ್ ಆರ್ಕೇಡ್ ಅಪಾರ್ಟ್​ಮೆಂಟ್ ನಲ್ಲೇ ವಾಸವಿರುವ ಗಂಗಾಧರ್​, ನೀರು ಬಿಡುವ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿ ನಿತ್ಯ ಪಿಎಸ್​ಐ ಕಾಟಕ್ಕೆ ಬೇಸತ್ತ ನಿವಾಸಿಗಳು, ಪಿಎಸ್​ಐ ವಿರುದ್ಧ ಧ್ವನಿ ಎತ್ತಿದ್ದಾರೆ. ಇದಕ್ಕೆ ಸಿಟ್ಟಾದ ಪಿಎಸ್​ಐ ಗಂಗಾಧರ್​ ನಡು ರಸ್ತೆಯಲ್ಲೇ ಅಪಾರ್ಟ್​ಮೆಂಟ್​ ನಿವಾಸಿ ಮೇಲೆ ಹಲ್ಲೆ ನಡೆಸಿ, ಗೂಂಡಾವರ್ತನೆ ತೋರಿದ್ದಾರೆ. ಬಳಿಕ ನಿವಾಸಿಗಳು ವಿಡಿಯೋವನ್ನು ಬೆಂಗಳೂರು ಸಿಟಿ ಪೊಲೀಸ್ ಟ್ವೀಟರ್ ಖಾತೆಗೆ ಟ್ಯಾಗ್​ ಮಾಡಿ ದೂರು ನೀಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು
ನೀರು ಮತ್ತು ಎಲೆಕ್ಟ್ರಿಸಿಟಿ ಬಂದ್ ವಿಚಾರಕ್ಕೆಪಿಎಸ್‌ಐ ಮತ್ತು ಅಪಾರ್ಟ್‌ಮೆಂಟ್ ಪ್ರೆಸಿಡೆಂಟ್ ಹಾಗೂ ನಿವಾಸಿಗಳ ನಡುವೆ ಮಾರಾಮಾರಿ ನಡೆದಿದ್ದು, ಅಪಾರ್ಟ್​ಮೆಂಟ್​ ನಿವಾಸಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿ ಸಹ ನಿವಾಸಿಗಳ ದೂರು ಆಧರಿಸಿ ಪಿಎಸ್‌ಐ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಈ ಹಿಂದೆ ಸಹ PSI ಗಂಗಾದರ್​ ಸಾಕಷ್ಟು ಬಾರಿ ಗಲಾಟೆ ಮಾಡಿದ್ದರಂತೆ. ಹೀಗಾಗಿ ಪಿಎಸ್‌ಐ ನನ್ನುಅಪಾರ್ಟ್​ಮೆಂಟ್‌ನಿಂದ ಬೇರೆಡೆಗೆ ಸ್ಥಳಾಂತರ ಮಾಡಲು ನಿವಾಸಿಗಳು ಮನವಿ ಮಾಡಿದ್ದಾರೆ. ಅಧಿಕಾರಿಗಳು ಸಹ ಸ್ಥಳಾಂತರ ಮಾಡುವ ಭರವಸೆ ನೀಡಿದ್ದಾರೆ.

ಅಪಾರ್ಟ್ ಮೆಂಟ್ ಮೇನ್ಟೇನೆನ್ಸ್ ವ ದರದ ವಿಚಾರಕ್ಕೆ ಗಲಾಟೆ
ಅಲ್ಲದೆ PSI ಗಂಗಾಧರ್​ ಕಳೆದ ಹಲವು ತಿಂಗಳಿನಿಂದ ಫ್ಲಾಟ್​ Maintenance ಚಾರ್ಜ್ ಪಾವತಿ ಮಾಡಿಲ್ಲ. ಹೀಗಾಗಿ ಅವರ ಮನೆಗೆ ಇಂದು ನೀರಿನ ಸಂಪರ್ಕ ಮತ್ತು ಎಲೆಕ್ಟ್ರಿಸಿಟಿ ಸಂಪರ್ಕ ಕಟ್ ಮಾಡಲಾಗಿತ್ತು. ಇದನ್ನು ಪಿಎಸ್​ಐ ಪ್ರಶ್ನೆ ಮಾಡಿ ಗಲಾಟೆ ತೆಗೆದಿದ್ದಾರೆ. ಈ ವೇಳೆ ಇಬ್ಬರು ನಿವಾಸಿಗಳನ್ನು ಠಾಣೆಗೆ ಕರೆದೊಯ್ಯಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ಇತರೆ ಅಪಾರ್ಟ್​ಮೆಂಟ್ ನಿವಾಸಿಗಳು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಘಟನಾಸ್ಥಳಕ್ಕೆಅಲ್ಲಿನ ನಿವಾಸಿ ಪಿಎಸ್‌ಐ ಗಂಗಾಧರ್ ಸಹಬಂದಿದ್ದರು. ಈ ವೇಳೆ ಅಪಾರ್ಟ್ಮೆಂಟ್ ನಿವಾಸಿಗಳು ಮತ್ತುಪಿ ಎಸ್ಐ ನಡುವೆ ಮಾರಾಮಾರಿ ನಡೆದಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com