ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದುವರೆಗೆ 2,052 ಮಳೆನೀರು ಚರಂಡಿಗಳ (ಎಸ್ಡಬ್ಲ್ಯುಡಿ) ಒತ್ತುವರಿಗಳನ್ನು ತೆರವುಗೊಳಿಸಿದೆ ಎಂದು ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ಪೀಠವು, 'ಸಿಟಿಜನ್ ಆಕ್ಷನ್ ಗ್ರೂಪ್' ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿತು.
ಬೆಂಗಳೂರು ನಾಗರಿಕ ಸಂಸ್ಥೆಯ ಮುಖ್ಯ ಇಂಜಿನಿಯರ್ (ಎಸ್ಡಬ್ಲ್ಯುಡಿ) ಎಂ. ಲೋಕೇಶ್ ಅವರು ಈ ಕುರಿತು ಕ್ರಮ ಕೈಗೊಂಡಿರುವ ವರದಿಯನ್ನು ಹೈಕೋರ್ಟ್ ಮುಂದೆ ಮಂಡಿಸಿದರು.
ಎಸ್ಡಬ್ಲ್ಯುಡಿ ('ರಾಜಕಾಲುವೆ') ಮೇಲಿನ 2,666 ಅತಿಕ್ರಮಣಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 2,052 ಅನ್ನು ಅಕ್ಟೋಬರ್ 11 ರ ವೇಳೆಗೆ ತೆರವುಗೊಳಿಸಲಾಗಿದೆ. ಉಳಿದ 614 ಅತಿಕ್ರಮಣಗಳಲ್ಲಿ 110 ಸಮಸ್ಯೆಗಳು ವಿವಿಧ ನ್ಯಾಯಾಲಯಗಳಲ್ಲಿವೆ. ಹೀಗಾಗಿ ಒಟ್ಟು 504 ಅತಿಕ್ರಮಣಗಳನ್ನು ತೆರವುಗೊಳಿಸಬೇಕಿದೆ ಎಂದು ವರದಿ ಹೇಳಿದೆ.
ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿ, ‘ದೊಡ್ಡ ಬಿಲ್ಡರ್ಗಳು ಹಾಗೂ ಪ್ರಭಾವಿ ರಾಜಕಾರಣಿಗಳು ಮಾಡಿರುವ ಒತ್ತುವರಿಯನ್ನು ಅಧಿಕಾರಿಗಳು ತೆರವುಗೊಳಿಸಿಲ್ಲ' ಎಂದು ಹೇಳಿದರು.
ಬೇಗೂರು ಕೆರೆಯ ಶೇ.50ರಷ್ಟು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಪರ ವಕೀಲರು ವಿಚಾರಣೆ ವೇಳೆ ಹೈಕೋರ್ಟ್ಗೆ ತಿಳಿಸಿದರು.
ಬೇಗೂರು ಕೆರೆ ಒತ್ತುವರಿ ಕುರಿತು ಕ್ರಮ ಕೈಗೊಂಡಿರುವ ವರದಿಯನ್ನು ಅಕ್ಟೋಬರ್ 14ರೊಳಗೆ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
Advertisement