ನಿವೇಶನ ಮಾಲೀಕರಿಗಿಲ್ಲ ಲಾಭಾಂಶ; ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್

ನಿವೇಶನ ಮಾಲೀಕರಿಗೆ ಲಾಭಾಂಶ ನೀಡದ ಆರೋಪದ ಮೇರೆಗೆ ಖ್ಯಾತ ರಿಯಲ್ ಎಸ್ಟೇಟ್ ಬಿಲ್ಡರ್ ಸಂಸ್ಥೆ ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್
ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್
Updated on

ಬೆಂಗಳೂರು: ನಿವೇಶನ ಮಾಲೀಕರಿಗೆ ಲಾಭಾಂಶ ನೀಡದ ಆರೋಪದ ಮೇರೆಗೆ ಖ್ಯಾತ ರಿಯಲ್ ಎಸ್ಟೇಟ್ ಬಿಲ್ಡರ್ ಸಂಸ್ಥೆ ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.

ಮಂತ್ರಿ ಕ್ಯಾಸಲ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಯೋಜನೆಯಾದ ‘ಮಂತ್ರಿ ಸೆರಿನಿಟಿ’ಗಾಗಿ 539 ಮನೆ ಖರೀದಿದಾರರಿಗೆ ಒಟ್ಟು 22.2 ಕೋಟಿ ರೂಪಾಯಿಗಳ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ ಲಾಭಾಂಶವನ್ನು ನೀಡಿಲ್ಲ ಎಂದು ಆಂಟಿ-ಪ್ರಾಫಿಟೀರಿಂಗ್ (ಲಾಭೋದ್ದೇಶ ವಿರೋಧಿ ಸಂಸ್ಥೆ)ಡೈರೆಕ್ಟರೇಟ್ ಜನರಲ್ ನಡೆಸಿದ ತನಿಖೆಯಿಂದ ತಿಳಿದುಬಂದಿದೆ. ಅಂತೆಯೇ ಅಕ್ಟೋಬರ್ 24 ರೊಳಗೆ ಈ ಬಗ್ಗೆ ವಿವರಣೆಯನ್ನು ನೀಡುವಂತೆ ಪ್ರಾಧಿಕಾರವು ಸಂಸ್ಥೆಯನ್ನು ಕೇಳಿದೆ.

ಕನಕಪುರ ಮುಖ್ಯರಸ್ತೆಯಲ್ಲಿರುವ ಮಂತ್ರಿ ಸೆರಿನಿಟಿಯಲ್ಲಿರುವ ತಮ್ಮ ಫ್ಲ್ಯಾಟ್‌ಗೆ ಜಿಎಸ್‌ಟಿ ಅಡಿಯಲ್ಲಿ ಪಾವತಿಸಿದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನ ಮರುಪಾವತಿಗಾಗಿ ದಂಪತಿಗಳಾದ ಸಂತೋಷ್ ಪಾಟೀಲ್ ಮತ್ತು ಸಿ ಪ್ರತಿಭಾ ಅವರು ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ, 2017 ರ ಸೆಕ್ಷನ್ 171 ರ ಅಡಿಯಲ್ಲಿ, ಖರೀದಿದಾರರಿಗೆ ಮೂಲ ಬೆಲೆಯನ್ನು ಕಡಿಮೆ ಮಾಡುವುದು ಬಿಲ್ಡರ್‌ನ ಜವಾಬ್ದಾರಿಯಾಗಿದೆ, ಇದರಿಂದಾಗಿ ಅವರು ಹೆಚ್ಚುವರಿ ಇನ್‌ಪುಟ್ ತೆರಿಗೆ ಕ್ರೆಡಿಟ್‌ನಿಂದ ಪ್ರಯೋಜನ ಪಡೆಯುತ್ತಾರೆ.

ದಂಪತಿಗಳು ಜಿಎಸ್‌ಟಿ ಪೂರ್ವದ ಅವಧಿಯಲ್ಲಿ ವಸತಿ ಯೋಜನೆಯ ಬ್ಲಾಕ್ 5 ರಲ್ಲಿ 3BHK ಫ್ಲಾಟ್, R-1903 ಅನ್ನು ಬುಕ್ ಮಾಡಿದ್ದರು, ಇದಕ್ಕಾಗಿ ಡಿಸೆಂಬರ್ 31, 2014 ರಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಈ ಕುರಿತು ಪಾಟೀಲ್ ಅವರು TNIE ಮಾಹಿತಿ ನೀಡಿದ್ದು, 'ನಮ್ಮ ಫ್ಲಾಟ್‌ನ ಬೆಲೆ 1 ಕೋಟಿ 10 ಲಕ್ಷ ರೂ. ನಮಗೆ ಮರುಪಾವತಿ ಮಾಡಬೇಕಾದ ಜಿಎಸ್‌ಟಿ 1 ಕೋಟಿ 1 ಲಕ್ಷ ರೂ.ಗಳನ್ನು ನಾವು ಈಗಾಗಲೇ ಎರಡು ಕಂತುಗಳಲ್ಲಿ ಅಂದರೆ ಒಂದು 2017 ರಲ್ಲಿ ಮತ್ತು ಇನ್ನೊಂದು 2018 ರಲ್ಲಿ ಪಾವತಿಸಿದ್ದೇವೆ ಎಂದು ಹೇಳಿದ್ದಾರೆ.

ಅವರ ದೂರಿನ ಆಧಾರದ ಮೇಲೆ, ಪ್ರಾಧಿಕಾರವು ಜುಲೈ 1, 2017 ಮತ್ತು ಮೇ 31, 2022 ರ ನಡುವೆ ಯೋಜನೆಯ ಕುರಿತು ತನಿಖೆಯನ್ನು ನಡೆಸಿತು. ಅದರ ವರದಿಯಲ್ಲಿ ಪ್ರಾಧಿಕಾರವು, ಮೂಲ ಬೆಲೆಗಿಂತ 12% GST ಮೊತ್ತವನ್ನು ಒಳಗೊಂಡಂತೆ 22,22,52,221 ರೂ.ಗಳ ಲಾಭವನ್ನು ಪಡೆದಿರುವುದು ಕಂಡುಬಂದಿದೆ. ಮೇಲೆ ಹೇಳಲಾದ ಲಾಭದಾಯಕತೆಯ ಲೆಕ್ಕಾಚಾರವು 539 ಮನೆ ಖರೀದಿದಾರರಿಗೆ ಸಂಬಂಧಿಸಿದೆ. ಅವರ ಸಂದರ್ಭದಲ್ಲಿ ಧನಾತ್ಮಕ ಬೇಡಿಕೆಗಳನ್ನು ಹೆಚ್ಚಿಸಲಾಗಿದೆ ಅಥವಾ ಮುಂಗಡಗಳನ್ನು ಸ್ವೀಕರಿಸಲಾಗಿದೆ. ಹೀಗಾಗಿ ಅರ್ಜಿದಾರರಿಗೆ ಸಂಸ್ಥೆ ಲಾಭಾಂಶ ಪಾವತಿಸಬೇಕು ಎಂದು ಹೇಳಿದೆ.

ಈ ಕುರಿತು ಮಂತ್ರಿ ಸೆರಿನಿಟಿಯ ಪ್ರತಿನಿಧಿಗಳು ಈವರೆಗೂ ಪ್ರತಿಕ್ರಿಯಿಸಲಿಲ್ಲ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com