ಹಬ್ಬ-ಹರಿದಿನಗಳ ಸಂದರ್ಭ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಉತ್ತುಂಗಕ್ಕೆ: ವರದಿ

ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಹಬ್ಬದ ಮಾರಾಟ ಮತ್ತು ಹೆಚ್ಚುತ್ತಿರುವ ದೇಶೀಯ ಬೇಡಿಕೆಯು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ.. ಬದಲಿಗೆ ಈ ಸಮಯದಲ್ಲಿ ನಿರುದ್ಯೋಗ ಪ್ರಮಾಣ ಉತ್ತುಂಗಗದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಹಬ್ಬದ ಮಾರಾಟ ಮತ್ತು ಹೆಚ್ಚುತ್ತಿರುವ ದೇಶೀಯ ಬೇಡಿಕೆಯು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ.. ಬದಲಿಗೆ ಈ ಸಮಯದಲ್ಲಿ ನಿರುದ್ಯೋಗ ಪ್ರಮಾಣ ಉತ್ತುಂಗಗದಲ್ಲಿದೆ ಎಂದು ವರದಿಯೊಂದು ತಿಳಿಸಿದೆ.

ದೇಶದ ನಿರುದ್ಯೋಗ ದರವು ಸೆಪ್ಟೆಂಬರ್‌ನಲ್ಲಿ 6.43% ರಿಂದ ಈ ತಿಂಗಳು 7.86% ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಯ ಇತ್ತೀಚಿನ ಅಂಕಿಅಂಶಗಳು ತೋರಿಸಿವೆ. ಗ್ರಾಮೀಣ ನಿರುದ್ಯೋಗ ಪ್ರಮಾಣ 8.01% ರಷ್ಟಿದ್ದು, ನಗರ ವಲಯದ ನಿರುದ್ಯೋಗ ಪ್ರಮಾಣವು 7.53% ರಷ್ಟು ಹೆಚ್ಚಾಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಗ್ರಾಮೀಣ ವಲಯದಲ್ಲಿ ಇತ್ತೀಚಿನ ಏರಿಕೆಯು ಸೆಪ್ಟೆಂಬರ್‌ನಲ್ಲಿನ 5.84% ಗ್ರಾಮೀಣ ನಿರುದ್ಯೋಗ ದರಕ್ಕೆ ತೀವ್ರ ವ್ಯತಿರಿಕ್ತವಾಗಿದೆ. ಇದು ಹಿಂದಿನ ತಿಂಗಳ 7.68% ಗಿಂತ ಕಡಿಮೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಟೀಮ್‌ಲೀಸ್ ಸರ್ವಿಸಸ್‌ನ ಮುಖ್ಯ ವ್ಯಾಪಾರ ಅಧಿಕಾರಿ ಮಹೇಶ್ ಭಟ್ ಅವರು, ಅನಿಯಮಿತ ಮಳೆ ಮತ್ತು ಆರ್ಥಿಕ ಪರಿಸ್ಥಿತಿಗಳ ಬಿಗಿತವು ಆರ್ಥಿಕ ಚಟುವಟಿಕೆಗಳ ಕುಸಿತಕ್ಕೆ ಕಾರಣವಾಯಿತು, ಇದು ಗ್ರಾಮೀಣ ಉದ್ಯೋಗದ ನಿರೀಕ್ಷೆಗಳ ಮೇಲೆ ಪರಿಣಾಮ ಬೀರಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತರ ತಜ್ಞರು ಸ್ಥೂಲ-ಆರ್ಥಿಕ ಅಂಶಗಳನ್ನು ದೂಷಿಸುತ್ತಿದ್ದು, "ಅಮೆರಿಕ ಮಾರುಕಟ್ಟೆಯಲ್ಲಿ ಹಿಂಜರಿತದ ಭಯವು ಅನೇಕ ಐಟಿ ಕಂಪನಿಗಳಲ್ಲಿ ಭೀತಿಯನ್ನು ಸೃಷ್ಟಿಸಿದೆ. ಹೊಸ ಪ್ರಾಜೆಕ್ಟ್‌ಗಳಿಗೆ ಬೇಡಿಕೆ ಕಡಿಮೆಯಾಗುವುದರ ವಿರುದ್ಧ ಮತ್ತು ಅಸ್ಥಿರ ಭವಿಷ್ಯಕ್ಕಾಗಿ ಅವರು ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿದ್ದಾರೆ. ಫ್ರೆಶರ್‌ಗಳು ಸೇರುವ ದಿನಾಂಕಗಳನ್ನು ಸಹ ಮುಂದೂಡಲಾಗುತ್ತಿದೆ, ಇದು ನಿರುದ್ಯೋಗ ದರವನ್ನು ಹೆಚ್ಚಿಸುತ್ತದೆ ಎಂದು CIEL HR ಸೇವೆಗಳ MD ಮತ್ತು CEO ಆದಿತ್ಯ ನಾರಾಯಣ ಮಿಶ್ರಾ ಹೇಳಿದ್ದಾರೆ. 

IT ಸಂಸ್ಥೆಗಳ CEO ಗಳು Q2 ಫಲಿತಾಂಶಗಳ ಸಮಯದಲ್ಲಿ ಎಚ್ಚರಿಕೆಯ ದೃಷ್ಟಿಕೋನಗಳನ್ನು ನೀಡಿದ್ದಾರೆ, ಆದರೆ ಗ್ರಾಹಕರು ದೊಡ್ಡ ವ್ಯವಹಾರಗಳನ್ನು ಮುಚ್ಚಲು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಸಾಹಸೋದ್ಯಮ ಬಂಡವಾಳ ನಿಧಿಯ ಹರಿವು ಉತ್ತುಂಗದಲ್ಲಿದ್ದಾಗ, ಅನೇಕ ಸ್ಟಾರ್ಟ್-ಅಪ್‌ಗಳು ನೇಮಕಾತಿಯ ಅಮಲಿನಲ್ಲಿದ್ದವು. ಆದರೆ ಬದಲಾಗುತ್ತಿರುವ ವ್ಯಾಪಾರದ ಡೈನಾಮಿಕ್ಸ್‌ ಪರಿಸ್ಥಿತಿಯೊಂದಿಗೆ, ಸಂಸ್ಥೆಗಳ ಆರ್ಥಿಕ ನಿಧಿಗಳು ಬತ್ತಿಹೋಗಿವೆ. 

"ಸ್ಟಾರ್ಟ್-ಅಪ್‌ಗಳು ತಮ್ಮ ಪ್ರತಿಭೆಯ ಕಾರ್ಯತಂತ್ರವನ್ನು ಮರುಹೊಂದಿಸುತ್ತಿವೆ ಮತ್ತು ಇದು ಒಟ್ಟಾರೆ ಉದ್ಯೋಗದ ಭಾವನೆಯ ಮೇಲೆ ಪರಿಣಾಮ ಬೀರಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭಯವು ಕಂಪನಿಗಳು ತಮ್ಮ ಆರ್ಥಿಕ ಮೂಲವನ್ನು ಬಿಗಿಗೊಳಿಸುವುದಕ್ಕೆ ಕಾರಣವಾಗಿದೆ. ಇದು ಅಲ್ಪಾವಧಿಯ ನೇಮಕಾತಿ ಭಾವನೆಗಳ ಮೇಲೆ ಪರಿಣಾಮ ಬೀರಿದೆ” ಎಂದು ಭಟ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com